ಈ ನಗರಕ್ಕೇಕೆ -
ಬೇಸರ
ನಿರಾಸೆ
ನಿರುತ್ಸಾಹ.
ಈ ನಗರಕ್ಕೇಕೆ -
ಒತ್ತಡ
ಹೊರೆ
ವೇಗ.
ಈ ನಗರಕ್ಕೇಕೆ -
ಶಬ್ದ ಮಾಲಿನ್ಯ
ವಾಯು ಮಾಲಿನ್ಯ
ತ್ಯಾಜ್ಯ ಮಾಲಿನ್ಯ.
ಈ ನಗರಕ್ಕೇಕೆ -
ನೀರಿನ ಅಭಾವ
ಬೆಳಕಿನ ಅಭಾವ
ಹಸಿರಿನ ಅಭಾವ.
ಈ ನಗರಕ್ಕೇಕೆ -
ತರಕಾರಿ ತುಟ್ಟಿ
ಬಾಡಿಗೆ ತುಟ್ಟಿ
ದಿನಸಿ ತುಟ್ಟಿ.
ಈ ನಗರಕ್ಕೇಕೆ -
ಕೋಮು ಗಲಭೆ
ಉಗ್ರರ ಧಾಳಿ
ಹಿಂಸೆ, ದ್ವೇಷ.
ಈ ನಗರಕ್ಕೇಕೆ -
ಅನಾರೋಗ್ಯ
ಅಯಾಸ
ಅಶಾಂತಿ
ಈ ನಗರಕ್ಕೇಕೆ?
ಏಕೆ ?
ಏಕೆ ?
ಏಕೆ ?
ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ
ಪ್ರತಿ ಪುಟವ ತಿರುಗಿಸಿ
ಆ ಕತೆಯು ಮುಗಿಸಿದ ನಂತರ
ಮತ್ತೆ ಹೊಸ ಕತೆಯ ಬರೆಯುವ ಚಂದಿರ
ಉರಿವ ಬಿಸಿಲಿಗೆ ಸುಡುವ ಒಡಲ
ಬೆವರು ಇಂಗಿಸಿ ನಗಿಸೊ ಚೋರ
ನೊಂದ ಮನದಿ ಬೆಂದ ಬಾಳನು
ಹಸನು ಮಾಡುವ ಚಂದಿರ
ಗುಡುಗು ಮಿಂಚು ಸಿಡಿಲ ಸಾಲು
ಧರೆಗೆ ಧಾರೆ ಮೋಡ ಕರಗಲು
ಕವಿದ ಕತ್ತಲು ಬೆತ್ತಲಾದರೆ
ಹಣತೆ ಬೆಳಗುವ ಚಂದಿರ
ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ
ಪ್ರತಿ ಪುಟವ ತಿರುಗಿಸಿ
ಆ ಕತೆಯು ಮುಗಿಸಿದ ನಂತರ
ಮತ್ತೆ ಹೊಸ ಕತೆಯ ಬರೆಯುವ ಚಂದಿರ
ಅಂತರಾಳದಿ ಅಡಗಿಸಿರುವ
ಸತತ ಸೋಲಿನ ಕಹಿಯ ಭಾವ
ಬೆಳದಿಂಗಳ ವಿಸ್ಮಯದ ಮೋಡಿಗೆ
ತಂಗಾಳಿಯಂತೆ ನಗುವ ಚಂದಿರ
ದಣಿದು ದಾಹಕೆ ಬಿರುಕು ಬಿಟ್ಟಿದೆ
ಮೊಗ್ಗು ಅರಳದೆ ಜಾರಿ ಬಿದ್ದಿದೆ
ಹಸಿರು ಹೊದಿಸಿ ಹೊಸತು ಚಿಗುರಿಗೆ
ಉಸಿರು ನೀಡುವ ಚಂದಿರ
ರವಿಯು ಏರಿ ದಿನವು ಹಾರಿ
ಬೆಳಕು ಕರಗಿದ ನಂತರ
ಮತ್ತೆ ಮೂಡಿ ಬರುವನು ಚಂದಿರ
ಪ್ರತಿ ಪುಟವ ತಿರುಗಿಸಿ
ಆ ಕತೆಯು ಮುಗಿಸಿದ ನಂತರ
ಮತ್ತೆ ಹೊಸ ಕತೆಯ ಬರೆಯುವ ಚಂದಿರ
ಅಬ್ಬಾ! ಇಲ್ಲಿಯವರೆಗೂ ಬಂದಾಯಿತು
ಎಷ್ಟೊಂದು ಭಾರ ಹೊತ್ತು
ದ್ವೇಷ, ಅಸೂಹೆ, ಅತೃಪ್ತಿ,ಅಸಹಾಯಕತೆ ,
ಅಸಮಧಾನ, ಕೋಪ, ಅಬ್ಬಬ್ಬಾ ...
ಒಂದೇ, ಎರಡೇ ಲೆಕ್ಕವಿಲ್ಲದಷ್ಟು
ಎಲ್ಲವೂ ಅನಗತ್ಯ, ಅನಾರೋಗ್ಯ, ಬೇಸರ
ನೆನೆದರೆ ಮತ್ತಷ್ಟು ಖಿನ್ನತೆ
ಮತ್ತೆ ಕೃತಕ ಅಮಲಿಗೆ ಶರಣು
ಮುಖಾಮುಖಿಗೆ ಧೈರ್ಯವೆಲ್ಲಿದೆ ?
ಎಲ್ಲವೂ ಅಸ್ಪಷ್ಟ
ಇನ್ನುಳಿದ ಹಾದಿ ಎಲ್ಲಿಯವರೆಗೆ
ಖಚಿತ ನಿರ್ಧಾರ ಕಷ್ಟ.
ಬೆರಳು ತೋರುವುದು ಸುಲಭ
ದೂರಲು ನೂರಾರು ಕಾರಣಗಳುಂಟು
ಹೊರಗೆ ಹುಡುಕಿದ್ದೇ ಸತತ;
ಒಳನೋಟ ಅಪರಿಚಿತ.
ಮೇಲ್ಪದರದಲ್ಲೇ ಪಯಣ
ಹಾದಿಯ ಎರಡು ಬದಿ ಬಣ್ಣ, ಬಣ್ಣ
ರುಚಿ ನೋಡುವ ಅಭ್ಯಾಸ
ಯಾಕೋ ತಿಳಿಯದು ಈ ಧಾವಂತ ?
ಅಂತರಂಗದ ಅರಿವು
ಬಹಿರಂಗ ಮಾರ್ಗದ ನೆರವು
ಸೂಕ್ಷ್ಮಗಳ ಸೆಳವಿನ ಅನುಭೂತಿ
ಪಡೆಯದೇ ದೊರಕುವುದೇ ಮುಕ್ತಿ ?
ಕಣ್ಸನ್ನೆಯಲೇ ಕುಶಲವ ಕೇಳಿ
ತುಟಿಯಂಚಿನಲಿ ಪ್ರಶ್ನೆಗಳ ಸೆರೆಹಿಡಿದು ,
ಬಿರುಗಾಳಿ ಎಬ್ಬಿಸಿ ,
ಮಿಂಚಂತೆ ಮಾಯವಾದಳು ಎಲ್ಲಿಗೆ ?
ಪಾರದರ್ಷಕ ಪ್ರತಿಬಿಂಬ ,
ನಿಶ್ಚಲ ನೀರಿನಂತಿದ್ದ ಮನಕೆ ,
ಹಿತವಾದ ಅನುಭವ ,
ಕಂಪಿಸುವ ಕಂಪನಗಳ ರೋಮಾಂಚನ !
ಅಸ್ಪಷ್ಟದ ಅಲೆಗಳ ಅಬ್ಬರಕೆ
ಲೀನವಾಗಿ, ಮರೆಯಾಗಿ ಜೊತೆಗೆ ,
ಹಿಡಿದಿಟ್ಟ ಪ್ರಶ್ನೆಗಳ ಎಸೆಯಲಿಲ್ಲವೇಕೆ ?
ಅಂತರಂಗದಾಳದಲಿ, ಅವಳ
ಮನದ ತಳಮಳಗಳಲಿ ತುಂಟ ಕಚಗುಳಿ
ಇಟ್ಟವನು ನಾನೇನು ?
ಕ್ಷಣಕೆ ಸೆರೆಸಿಕ್ಕ ಅದ್ಭುತ ಕಲಾಕೃತಿ ,
ಸ್ಥಿರವಾಗಿ ಮನಸ್ಪುಟದಲ್ಲಿ ನೆಲೆಸಿ
ಮರೆಯುವ ಯತ್ನ ಮತ್ತೆ ಮತ್ತೆ ಸೋತಿದೆಯೆ ?
ಊಹೆಗಳು ದುಂಬಿಗಳಾಗಿ ಗಿರಕಿ ಹೊಡಿಯುತ್ತಿವೆಯೆ ?
ಕಾಣದ ನದಿಯಲ್ಲಿ ಮುಳುಗಿರುವೆನೇಕೆ ?
ಬೇರೆಡೆಗೆ ಮನವ ಸೆಳೆಯಲಾರೆನೇಕೆ ?
ಹೊರ ಜಗವು ಬತ್ತಿ ಬರಿದಾಯಿತೇಕೆ ?
ಇವಳ ಜೊತೆಗಿರುವ ಬಯಕೆ ನನಗೇಕೆ ?
ಹೇಗಿರುವಳೋ, ಎಲ್ಲಿರುವಳೋ,
ಮಾತಿಲ್ಲ, ಸುಳಿವಿಲ್ಲ, ಹೆಸರು ಗೊತ್ತಿಲ್ಲ ?
ನನ್ನ ನಿತ್ಯ ಪಯಣವ ಕಟ್ಟಿ ಕಾಣೆಯಾದವಳು;
ಈ ಒಗಟು ಬಿಡಿಸಳು ಅವಳೆಂದು ಬರುವಳು ?
ಈ ಅನಂತ
ಮೌನ
ಚಿಂತನ, ಮಂಥನ
ಚಿರಯೌವನ.
ಬಿರುಗಾಳಿಗೆ ಮೈಯೊಡ್ಡಿ
ಭೋರ್ಗರೆವ ಅಲೆಗಳ
ಮೇಲೆ ರುದ್ರನರ್ತನ.
ಕಾಲಗರ್ಭದ ಮಿತಿ
ಭಾವ, ಬಂಧು
ಸಿಂಧೂರ ಸೌಂಧರ್ಯ
ನಿಸರ್ಗ ಚಿತ್ತದ ಜೊತೆ ಸರಸ.
ಈ ಹಾದಿಯಲ್ಲೆಲ್ಲಾ
ಕಲ್ಲು, ಮುಳ್ಳು
ಸಾಲು ಮರಗಳ
ನೆರಳು.
ಪಾಪಿಷ್ಟ, ಕೋಪಿಷ್ಟ
ಸಾಧು, ಸಂತ
ಇಳೆಗೆ ಎಲ್ಲವೂ
ಮೀಸಲು.
ನೀರವ ಮೌನ
ಒಮ್ಮೆಗೇ
ಬಿರುಗಾಳಿಯ
ಆಕ್ರಂದನ
ಮತ್ತದೇ ಮೌನ.
ಹಾಡು: ಮುಸ್ಸಂಜೆ
ಮೋಡ ತಡೆದು
ಮಳೆ ಸುರಿಸಿದ
ಬೆಟ್ಟಕ್ಕೆ
ನೀರಿನ ಅಭಾವ.
ಬೆಟ್ಟದಿಳಿಜಾರಿನಲಿ
ನೀರು ನಿಲ್ಲಲು
ಸಾಧ್ಯವೆ?
ತಡೆಗೋಡೆ ವಿರಳ.
ಕೆಳಗೆಲ್ಲೋ
ಕಟ್ಚಲೂ ಬಹುದೊಂದು
ಅಣೆಕಟ್ಟು
ಅದಕ್ಕೇನು ಲಾಭ?
ಆದರೂ ಅದಕ್ಕೆ
ನಿಶ್ಚಿಂತೆ
ಇಲ್ಲ ಕಿಂಚಿತ್ತು
ಹಸಿರಿನ ಕೊರತೆ.
ಕುಡಿಯಲು ನೀರು
ಉರಿಬಿಸಿಲಿಗೆ ನೆರಳು
ಕಲ್ಲುಗುಂಡುಗಳಡಿ
ಬೀಸುವ ತಂಗಾಳಿ.
ಇಲ್ಲಿ ಜಾರುವ ಕವಿಗೂ
ಉಂಟು ಒಂದು ಸ್ಧಾನ.
ಹಾಡು: ಮುಸ್ಸಂಜೆ
ಊರಬ್ಬದ ಸಲುವಾಗಿ
ಬೆಳೆಸಿದ್ದ ಸಿದ್ದ
ಕೊಬ್ಬಿದ ಐನಾತಿ
ಟಗರೊಂದ
ಬೆಳಗಿಂದ ಸಂಜೆ
ಅದರದೇ ಖದರು
ಸ್ನಾನ, ಮಸಾಜು ,
ಹಸಿ ಹಸಿ ಮೇವು
ಸಿದ್ದನೆಂಡತಿ ಸುಬ್ಬಿ
ಇದರ ಕಂಡಾಗವಳ
ಕಣ್ಣು, ಮೂಗು, ಮಖವೆಲ್ಲ
ಕೆಂಪು ಕೆಂಪು
ಇವಯ್ಯಂಗೆ ಹೊಟ್ಟೆಗಿಟ್ಟಿಲ್ಲ
ಜುಟ್ಟಿಗೆ ಮಲ್ಲಿಗಿ ಹೂ
ಹೆಂಡ್ತಿ ಯ್ಯಾಕ
ಟಗರನ್ನೆ ಆಗಬೇಕಿತ್ತು
ಉರಿದು ಬೀಳುವಳು
ಲಬ ಲಬ ಲಬ ಲಬ
ಕಿವಿಮುಚ್ಚಿ ಕುಂತ ಸಿದ್ದ
ಬೀಡಿ ಹಚ್ಚುವಾಸೆ ತೊರೆದು
ಟಗರಿನ ಇಚಾರ
ಊರ ಮಂದೀಗೆ ಕರೆದೇಳ್ತಾನ
ನನ್ನ ಇಸ್ಯ ಇವನ
ಬಾಯಿಗ್ಬರಂಗೇಯಿಲ್ಲ
ಹಬ್ಬ ಹತ್ತಿರವಾದಂತೆ
ಸಿದ್ದ ಸಪ್ಪಗಿದ್ದ
ಅಂದು ಟಗರೆಳೆದೊಯ್ದಾಗ
ಅಂವ ಬಿಕ್ಕಿ ಬಿಕ್ಕಿ ಅತ್ತಿದ್ದ
ಸುಬ್ಬಿ ಕಣ್ಣಂಚು ಒದ್ದೆ ಒದ್ದೆ
ಕೈಹಿಡಿದು ಒಳಗೊಯ್ದು
ಮಮತೆ ಮಾಗಿದ ಕ್ಷಣ
ಎದೆಗೊತ್ತಿ ಮಲಗಿ ಸಮಾಧಾನ
ಆಳದಲಿ ಅಡಗಿಸಿಟ್ಟ
ಅಮೂಲ್ಯ ಆಸ್ತಿ
ಸುತ್ತಲೂ ಸುತ್ತಿ ಸುತ್ತಿ
ಬ್ಯಾಂಡ್ಯೇಜು ಸುತ್ತುವಂತೆ
ಒಂದರ ಮೇಲೊಂದು ಪೇರಿಸಿ
ಎಷ್ಟೋ ಲೆಕ್ಕವಿಲ್ಲದಷ್ಟು ಸಲ
ಭಾರೀ ಮಜಬೂತು
ಆಗ ಒಂದಷ್ಟು ತೃಪ್ತಿ.
ಬಿಡಿಸಲು ಅಸಾಧ್ಯ
ನೂರೆಂಟು ಬ್ರಹ್ಮಗಂಟು
ಆದಿ, ಅಂತ್ಯದ
ಸುಳಿವಿಲ್ಲ
ಕೈ ಕಾಲು ನೆಟ್ಟಗಿದ್ದರು
ಪ್ರಯತ್ನ ಫಲಕಾರಿಯಾಗುವ
ಭರವಸೆಯಿಲ್ಲ
ಪೆಟ್ಟು ಹೆಚ್ಚಾದಂತೆ
ನೆನಪುಳಿಸಿ ,
ಉಮ್ಮಸ್ಸು ಕರಗುವುದು ನಿಜ.
ಎಲ್ಲರ ಕಣ್ತಪ್ಪಿಸಿ
ತೀವ್ರ ನಿಗಾವಹಿಸಿ
ನಿಶಬ್ಧ ವಾತಾವರಣದೆಡೆಗೆ
ಸುಳಿವು ಸಿಗದ
ನಿಗೂಢ ಸ್ಥಳದಲ್ಲಿ
ಸುಲಭ ಕಾರ್ಯದಲ್ಲಿ
ಕೃತಕ ವಿಶ್ರಾಂತಿ
ನೆನಪುಗಳು ಮಾಗಿದಷ್ಟೂ
ಭರಿಸಲಾಗದೆ ಬೆನ್ನು ಹತ್ತುವ ರುಚಿ.
ಕದಲಿಸುವ ಮುನ್ನ
ಕರುಣೆಯಿರಲಿ
ಉರಿವ ಉಲ್ಕೆಗಳು
ಬೀಳುವವು ಮೈ ಮೇಲೆ
ಭಯ ಸಹಜ
ಭಾರವಿಳಿಸುವ ಬಯಕೆ
ಸ್ವಾಭಾವಿಕ
ನೀತಿ, ನಿಯಮ ಪಾಲನೆ
ಇಲ್ಲಿ ಕಡ್ಡಾಯವೇನಲ್ಲ.
ಹಾಡು: ಮುಸ್ಸಂಜೆ
ಹಕ್ಕಿಯೊಡಳೊಳಗೆ ಅಡಗಿ
ಪಿಸುಗುಡುವ ಹತ್ತಾರು ಚುಕ್ಕಿ
ಗರ್ಭದೊಳಗಿನ ಬ್ರಹ್ಮಾಂಡ ಹೊಕ್ಕಂತೆ
ಬಿಗುವಾದ ಮುಖ ಸಡಿಲಿಸುವ ಹಂಬಲ
ಕೃತಕ ನಗುವಿಂದ ಕರೆವ
ಲಲನೆಯರ ಪ್ರತ್ಯಕ್ಷ ,
ಕಿರುನಗು, ಪಿಸು ಮಾತು, ಇಲ್ಲಿ
ಕಿರಿಕಿರಿಗಿಲ್ಲ ಅವಕಾಶ
ವಿಶೇಷ ಸೂಚನೆಗಳ ಜೊತೆ
ಸೂಕ್ತ ಸವಲತ್ತು ಲಭ್ಯ
ಸೆರೆಸಿಕ್ಕ ಹಕ್ಕಿಗಳ ಭಯಮಿಶ್ರಿತ ಮುಖಭಾವ
ನಿಟ್ಟುಸಿರಿಡುವ ತವಕ ನಿಮಿಷದ ಲೆಕ್ಕ
ಚಲನೆ ಶುರುವಿಟ್ಟ ಕ್ಷಣ
ರಭಸದೆದೆಬಡಿತ,
ಆಗಸದೆಡೆಗೆ ಒಮ್ಮೆಗೆ ಹಾರಿ ಮೋಡಗಳಲಿ
ತೂರುವ ತವಕ.
ಅಲ್ಲಲ್ಲಿ ಹಸಿರ ತೇಪೆ, ಕೆರೆಗಳ ತಿಲಕ ,
ಬೆಟ್ಟ, ಗುಡ್ಡದ ಮೊಡವೆ, ರಸ್ತೆ ಓಡಾಡುವ ಹಾವು
ಮನೆಗಳು ಬೆಂಕಿಪೊಟ್ಟಣ ಜೋಡಿಸಿಟ್ಟಂತೆ
ಬಿಳಿ, ಹಳದಿ, ಕೆಂಪು ಕಂಡು ಮರೆಯಾದವು
ಮೋಡಗಳ ನುಸುಳಿ ಹೊಕ್ಕಂತೆ
ಎತ್ತಿನಗಾಡಿ ಸವಾರಿ ನೆನಪು
ದಾಟಿ ಹಾರಲು ಹೊರಗೆ
ಆಗಸದಲ್ಲಿ ಅಲೆವ ನಾರದನ ನೆನಪು.
ಹಗಲು ಕರಗಿದಂತೆಲ್ಲಾ ಮಿಂಚುವ ಹಣತೆಗಳ ಸಾಲು
ಅಲ್ಲಲ್ಲಿ ಬೆಳಗುವ ತಾರೆಗಳ ಹಿಂಡು, ಹಿಂಡು
ಉಯ್ಯಾಲೆ ತೂಗಿ ಆರತಿಯ ಬೆಳಗಿ
ಅತ್ತಿತ್ತ ಕಣ್ಣಾಡಿಸಿ ದಾರಿ ಹುಡುಕುವ ದೀಪ
ಜಾರಿ ಬಿದ್ದಂತೆ, ತಡೆದು ನಿಂತಂತೆ
ಧರೆಗೆ ಮುತ್ತಿಡುವ ಆತುರ
ಭೂಕಂಪವಾದಂತೆ ಕ್ಷಣ ಉಸಿರು ನಿಂತು
ನಿಟ್ಟುಸಿರಿಡುವ ಸಮಯ, ಅಂತೂ ಗೆದ್ದ ಭಾವ.
ಹಾಡು: ಮುಸ್ಸಂಜೆ
ಸಾಲ ಕೊಡುವವನಿವ
ಬೇಕಾದವರೆಲ್ಲ
ಸಾಲಲ್ಲಿ ನಿಲ್ಲಿ, ನಿಯಮ
ಪಾಲನೆ ಅಗತ್ಯ
ಸರದಿ ಬರುವವರೆಗೆ
ಕಾಯಬೇಕು
ಕಾಯೋ, ಹಣ್ಣೋ
ನಂತರ ನಿರ್ಧಾರ
ಅದೃಷ್ಟದೊಂದಿಗೆ ,
ಸಾಮರ್ಥ್ಯ ಪರೀಕ್ಷೆ
ಅನಿವಾರ್ಯತೆಯ ಪಾತ್ರ
ಬಹಳ ಪ್ರಮುಖ
ಕೊಡುವವನಿಗೆ ಕೊಟ್ಟವನ್ಯಾರು
ಇರಬಹುದೇ ಇವನಿಗೂ
ನೀತಿ,ನಿಯಮ ,
ಹಲವು ಶರತ್ತು
ಕೊಡುವವನ್ಯಾರೋ ,
ಪಡೆದವನ್ಯಾರೋ ,
ಕೊಡುವ, ಪಡೆಯುವ
ಲೆಕ್ಕಕೆ ಬೇಕೆ ವಿವರ
ಪೂರ್ವ ನಿಯೋಜಿತವೋ ,
ಪರಿಶ್ರಮಕ್ಕೆ ತಕ್ಕ
ಪ್ರತಿಫಲವೋ
ಸಿಗದು ಯಾವ ಉತ್ತರ
