May 13, 2013

ಹುತಾತ್ಮ




ಮುನ್ನಡೆದು
ಹಾದಿ ತೆರದಂತೆ
ಕತ್ತಲು ಬೆಳಗಿನ ಜೋಡು
ಕುಗ್ಗದೆ, ದಣಿದು, ಸಾವರಿಸಿಕೊಂಡು
ಕೋಪ ತಾಪಗಳ ಸೆಲೆಯಲ್ಲಿ
ಸ್ವಹಿತದ ಚಿತ್ತ
ಪಿತ್ತ ನೆತ್ತಿಗೇರಿಸಿಕೊಂಡು
ದುರಾಸೆ, ನಿರಾಸೆಗಳ
ವಿಕ್ರಯಗೊಳ್ಳದ
ರಾಶಿ ರಾಶಿ ಗೊಬ್ಬರ
ನೋವು ನಲಿವುಗಳ
ಸೆಳೆತಕೆ ವಿಚಲಿತಗೊಳ್ಳದೆ
ತಳಮಳ, ಪುಳಕಗಳ
ಪೊದೆಯೊಳಗೆ ತೂರಿ, ತೆರೆದು
ಆಸೆ, ಆಶಯಗಳೊಂದಿಗೆ
ಆಯುಷ್ಯವೂ ಕ್ರಯಿಸಿ
ಪಳಗಿ, ಪಳಗಿಸಿಗೊಂಡು
ಫಲ ಪುಷ್ಪಗಳ ಗೊಂಚಲು
ಹುತಾತ್ಮನಾಗುವ ಹಂಬಲ
ಈಡೇರದ ಬಯಕೆ
ಚಲಿಸದ ಗೇಹ
ತೊರೆದ ಚಣ
ಆತ್ಮಕೆ ಪ್ರಾಪ್ತಿ
ನಿಟ್ಟುಸಿರು.