ದೇವರು ಅವನ ಬುದ್ಧಿವಂತಿಕೆಯಿಂದ
ನೊಣವನ್ನು ಸೃಷ್ಟಿಸಿದ
ತದನಂತರ,
ಏಕೆಂದು
ನಮಗೆ ಹೇಳುವುದ
ಮರೆತ
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
Showing posts with label ಓಗ್ದೆನ್ ನಾಶ್. Show all posts
Showing posts with label ಓಗ್ದೆನ್ ನಾಶ್. Show all posts
May 28, 2009
ಕೆಡುಕು ಮಾಡುವವರ ಸೂಕ್ಷ್ಮ ಅವಗಾಹನೆಗೆ
ಆತ್ಮಸಾಕ್ಷಿಯ ಪ್ರಖರ ಪ್ರಭಾವವೊಂದಿದವನು
ಅವೈಜ್ಞಾನಿಕತೆಯ ಬಗ್ಗೆ ಬಹುವಾಗಿ ಚಿಂತಿಸುತ್ತಾನೆ;
ಯಾವುದೇ ಮೌಲ್ಯಗಳ ಅಥವಾ ನೈತಿಕತೆಯ
ಪ್ರಭಾವದ ಲಾಭ ಪಡೆಯದಂಥವನ
ತುಂಟತನ ಮತ್ತು ಅವನ ವರಮಾನ
ಬಹುಬೇಗ ನಾಲ್ಕುಪಟ್ಟು ಬೆಳೆದಿರುತ್ತದೆ.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ಅವೈಜ್ಞಾನಿಕತೆಯ ಬಗ್ಗೆ ಬಹುವಾಗಿ ಚಿಂತಿಸುತ್ತಾನೆ;
ಯಾವುದೇ ಮೌಲ್ಯಗಳ ಅಥವಾ ನೈತಿಕತೆಯ
ಪ್ರಭಾವದ ಲಾಭ ಪಡೆಯದಂಥವನ
ತುಂಟತನ ಮತ್ತು ಅವನ ವರಮಾನ
ಬಹುಬೇಗ ನಾಲ್ಕುಪಟ್ಟು ಬೆಳೆದಿರುತ್ತದೆ.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ದುಷ್ಟ ಪ್ರಪಂಚಕ್ಕೊಂದು ಪ್ರತಿಬಿಂಬ
ಪರಿಶುದ್ಧತೆ ಎಂಬುದು
ತಿಳುವಳಿಕೆಗೆ ನಿಲುಕದ್ದು.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ತಿಳುವಳಿಕೆಗೆ ನಿಲುಕದ್ದು.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ನನ್ನ ಕನಸು
ಇದು ನನ್ನ ಕನಸು,
ಇದು ನನ್ನ ಸ್ವಂತದ ಕನಸು,
ನಾನೇ ಅ ಕನಸು ಕಂಡದ್ದು.
ನಾ ಕನಸು ಕಂಡೆ, ನನ್ನ ಕಾಂತಿಯುಕ್ತ ಕೂದಲನ್ನು ಸೊಗಸಾಗಿ, ಸ್ವಚ್ಛವಾಗಿ ಬಾಚಿದ್ದೇನೆಂದು.
ನಂತರ, ಮತ್ತೊಂದು ಕನಸು ಕಂಡೆ ನನ್ನ ನಿಜವಾದ ಪ್ರೀತಿ
ನನ್ನ ಕೂದಲನ್ನು ಯದ್ವಾತದ್ವಾ ಕೆಡಿಸಿ, ಯರ್ರಾಬಿರ್ರಿ ಉದುರಿಸಿ ಬಿಟ್ಟಿದ್ದಾಳೆಂದು.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ಇದು ನನ್ನ ಸ್ವಂತದ ಕನಸು,
ನಾನೇ ಅ ಕನಸು ಕಂಡದ್ದು.
ನಾ ಕನಸು ಕಂಡೆ, ನನ್ನ ಕಾಂತಿಯುಕ್ತ ಕೂದಲನ್ನು ಸೊಗಸಾಗಿ, ಸ್ವಚ್ಛವಾಗಿ ಬಾಚಿದ್ದೇನೆಂದು.
ನಂತರ, ಮತ್ತೊಂದು ಕನಸು ಕಂಡೆ ನನ್ನ ನಿಜವಾದ ಪ್ರೀತಿ
ನನ್ನ ಕೂದಲನ್ನು ಯದ್ವಾತದ್ವಾ ಕೆಡಿಸಿ, ಯರ್ರಾಬಿರ್ರಿ ಉದುರಿಸಿ ಬಿಟ್ಟಿದ್ದಾಳೆಂದು.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ಜನರ ಬಗ್ಗೆ ಮತ್ತಷ್ಟು
ಜನರು ಯಾವಾಗ ಪ್ರಶ್ನೆಗಳನ್ನು ಕೇಳುವುದಿಲ್ಲವೋ
ಆಗ ಅವರು ಸಲಹೆಗಳನ್ನು ನೀಡುತ್ತಿರುತ್ತಾರೆ
ಮತ್ತೆ ಇವೆರಡರಲ್ಲಿ ಯಾವುದನ್ನೂ ಮಾಡದಿದ್ದಾಗ
ಅವರು ನಿಮ್ಮ ಭುಜಗಳ ಮೇಲೆ ನೋಡುತ್ತಿರುತ್ತಾರೆ ಅಥವಾ ನಿಮ್ಮ ಹೆಬ್ಬೆರಳ ಮೇಲೆ ತುಳಿಯುತ್ತಿರುತ್ತಾರೆ
ಆಮೇಲೆ ನಿಮಗೆ ಕೋಪ ಬರಿಸಲು ಇದೆಲ್ಲ ಸಾಲದೆಂಬಂತೆ
ಅವರು ನಿಮ್ಮನ್ನು ಕೆಲಸಕ್ಕಿಟ್ಟುಕೊಳ್ಳುತ್ತಾರೆ.
ಯಾರಾದರೂ ಸುಮ್ಮನಿರುವಾಗ
ಎಲ್ಲರ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ.
ಇದು ತುಂಬಾ ಮುಜುಗರ ಉಂಟುಮಾಡುವಂತೆ ತೋರಬಹುದು
ಕೆಲಸ ಮಾಡುವವರಿಗೆ, ಕೆಲಸ ಮಾಡದವರನ್ನು ಕಂಡಾಗ,
ಅದಕ್ಕೆ, ಅವರು ಹೇಳುತ್ತಾರೆ ಕೆಲಸವೆಂಬುದು ಅದ್ಭುತ ಔಷದಿಯೆಂದು,
ಒಂದು ಕ್ಷಣ ಇವರನ್ನು ನೋಡಿ ಫೈರ್ಸ್ಟೋನ್, ಫೋರ್ಡ್, ಎಡಿಸನ್,
ಮತ್ತೆ ಅವರು ಉಪದೇಶ ನೀಡುತ್ತಲೇ ಇರುತ್ತಾರೆ ಉಸಿರು ನಿಲ್ಲುವವರೆಗೂ, ಅಥವಾ ಏನಾದರೂ
ನೀವೇನಾದರೂ ಅವರಿಗೆ ಬಗ್ಗದಿದ್ದರೆ, ನಿಮಗೆ ಹಸಿವಿನಿಂದ ಸಾಯಿಸುತ್ತಾರೆ, ಅಥವಾ ಇನ್ನೇನಾದರು.
ಇವೆಲ್ಲವೂ ಬಹಳ ಕೊಳಕು ಅಸಭ್ಯನಡತೆಯಲ್ಲಿ ಕೊನೆಯಾಗುತ್ತದೆ:
ಒಂದುವೇಳೆ ನೀವೇನಾದರೂ ಉದ್ಯೋಗ ಮಾಡಲೇ ಬಾರದೆಂದಿದ್ದರೆ,
ನೀವು ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ, ಬೇಕಾದಷ್ಟು ಹಣ ಗಳಿಸಿ ಮತ್ತೆ ಎಂದೂ ಕೆಲಸ ಮಾಡದಿರಲು.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ಆಗ ಅವರು ಸಲಹೆಗಳನ್ನು ನೀಡುತ್ತಿರುತ್ತಾರೆ
ಮತ್ತೆ ಇವೆರಡರಲ್ಲಿ ಯಾವುದನ್ನೂ ಮಾಡದಿದ್ದಾಗ
ಅವರು ನಿಮ್ಮ ಭುಜಗಳ ಮೇಲೆ ನೋಡುತ್ತಿರುತ್ತಾರೆ ಅಥವಾ ನಿಮ್ಮ ಹೆಬ್ಬೆರಳ ಮೇಲೆ ತುಳಿಯುತ್ತಿರುತ್ತಾರೆ
ಆಮೇಲೆ ನಿಮಗೆ ಕೋಪ ಬರಿಸಲು ಇದೆಲ್ಲ ಸಾಲದೆಂಬಂತೆ
ಅವರು ನಿಮ್ಮನ್ನು ಕೆಲಸಕ್ಕಿಟ್ಟುಕೊಳ್ಳುತ್ತಾರೆ.
ಯಾರಾದರೂ ಸುಮ್ಮನಿರುವಾಗ
ಎಲ್ಲರ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ.
ಇದು ತುಂಬಾ ಮುಜುಗರ ಉಂಟುಮಾಡುವಂತೆ ತೋರಬಹುದು
ಕೆಲಸ ಮಾಡುವವರಿಗೆ, ಕೆಲಸ ಮಾಡದವರನ್ನು ಕಂಡಾಗ,
ಅದಕ್ಕೆ, ಅವರು ಹೇಳುತ್ತಾರೆ ಕೆಲಸವೆಂಬುದು ಅದ್ಭುತ ಔಷದಿಯೆಂದು,
ಒಂದು ಕ್ಷಣ ಇವರನ್ನು ನೋಡಿ ಫೈರ್ಸ್ಟೋನ್, ಫೋರ್ಡ್, ಎಡಿಸನ್,
ಮತ್ತೆ ಅವರು ಉಪದೇಶ ನೀಡುತ್ತಲೇ ಇರುತ್ತಾರೆ ಉಸಿರು ನಿಲ್ಲುವವರೆಗೂ, ಅಥವಾ ಏನಾದರೂ
ನೀವೇನಾದರೂ ಅವರಿಗೆ ಬಗ್ಗದಿದ್ದರೆ, ನಿಮಗೆ ಹಸಿವಿನಿಂದ ಸಾಯಿಸುತ್ತಾರೆ, ಅಥವಾ ಇನ್ನೇನಾದರು.
ಇವೆಲ್ಲವೂ ಬಹಳ ಕೊಳಕು ಅಸಭ್ಯನಡತೆಯಲ್ಲಿ ಕೊನೆಯಾಗುತ್ತದೆ:
ಒಂದುವೇಳೆ ನೀವೇನಾದರೂ ಉದ್ಯೋಗ ಮಾಡಲೇ ಬಾರದೆಂದಿದ್ದರೆ,
ನೀವು ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ, ಬೇಕಾದಷ್ಟು ಹಣ ಗಳಿಸಿ ಮತ್ತೆ ಎಂದೂ ಕೆಲಸ ಮಾಡದಿರಲು.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ಕೇಳಿಸಿಕೊ...
ತಲೆ ಬುರುಡೆಯಲ್ಲೇನೋ ಬಡಿಯುತ್ತಲೇ ಇದೆ
ಕೊನೆಯಿಲ್ಲದ ಮೌನ ಚೀತ್ಕಾರ
ಏನೋ ಗೋಡೆಯ ಮೇಲೆ ಹೊಡೆಯುತ್ತಾ,
ಮತ್ತೆ ಅಳುತ್ತಾ ಇದೆ, “ನನ್ನ ಹೊರಗೆ ಬಿಡಿ!” ಎಂದು
ಅದು ಏಕಾಂಗಿ ಸೆರೆಯಾಳು
ಜವಾಬನ್ನು ಎಂದೂ ಕೇಳಿಸಿಕೊಳ್ಳುವುದಿಲ್ಲ.
ಕಾಲಾತೀತದಲ್ಲಿ ಯಾವ ಜೊತೆಗಾರನೂ
ಆ ತೀವ್ರ ವೇದನೆಯನ್ನು ಕೇಳಿಸಿಕೊಳ್ಳಲಿಲ್ಲ.
ಆ ಉಗ್ರ ಹಿಂಸೆಯನ್ನು ಯಾವ ಹೃದಯವು ಹಂಚಿಕೊಳ್ಳಲಿಲ್ಲ
ಅವನ ಭಯಾನಕ ಕತ್ತಲಲ್ಲಿ, ಭೂತದಂತೆ ಪದೇ ಪದೇ ಕಾಣಿಸಿಕೊಳ್ಳುತ್ತದೆ.
ಯಾವುದೋ ಲೋಹದ ಸದ್ದಿನ ಮೂಲಕ ಬೆಳಕು ಹರಿಯುತ್ತದೆ
ಬೇರೆ ಯಾವ ಕಣ್ಣೂ ಗುರುತಿಸದಂತೆ.
ಮಾಂಸಖಂಡಗಳನ್ನು, ತೀವ್ರ ಬಯಕೆಯ ಮಾಂಸಖಂಡಗಳೊಡನೆ ಸೇರಿಸಿದಾಗ
ಮತ್ತು ಶಬ್ದಗಳೆಲ್ಲವೂ ಸರಾಗವಾಗಿ, ಬೆಚ್ಚಗೆ ಹಾಯಾಗಿ ಓಡುವಾಗ,
ನನಗನ್ನಿಸುತ್ತದೆ, ಅವನು ಆಗ ಒಬ್ಬಂಟಿ ಎಂದು
ತಲೆ ಬುರುಡೆಯಲ್ಲಿ ಸೆರೆಯಾದವನೆಂದು.
ಜಾಲರಿಯಲ್ಲಿ ಹಿಡಿಯಲಾದ ರಕ್ತನಾಳಗಳು
ಮೃದು ಹೊದಿಕೆಯ ಕಣಗಳಿಂದ ಕೂಡಿದ ಎಲುಬುಗಳು,
ಅವನು ಏಕಾಂಗಿಯಾಗುತ್ತಾನೆ, ಯಾವಾಗ
ಅವನು ಏಕಾಂಗಿಯಲ್ಲವೆಂದು ನಟಿಸುತ್ತಾನೋ ಆಗ.
ನಾವು ಅವರನ್ನು ಬಂಧಮುಕ್ತರನ್ನಾಗಿಸುತ್ತೇವೆ
ಆ ದುರಂತವನ್ನು ಸಂಯಮದಿಂದ ಸಹಿಸಿಕೊಳ್ಳಬಹುದು
ನೀನು ಮಾತ್ರ ನನ್ನ ತಲೆ ಬುರುಡೆಯನ್ನು ತೆರೆದಿಟ್ಟಾಗ,
ಅಥವಾ ನಾನು ನಿಧಾನವಾಗಿ ನಿನ್ನ ತಲೆ ಬುರುಡೆಗೆ ಪ್ರವೇಶಿಸುತ್ತೇನೆ.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ಕೊನೆಯಿಲ್ಲದ ಮೌನ ಚೀತ್ಕಾರ
ಏನೋ ಗೋಡೆಯ ಮೇಲೆ ಹೊಡೆಯುತ್ತಾ,
ಮತ್ತೆ ಅಳುತ್ತಾ ಇದೆ, “ನನ್ನ ಹೊರಗೆ ಬಿಡಿ!” ಎಂದು
ಅದು ಏಕಾಂಗಿ ಸೆರೆಯಾಳು
ಜವಾಬನ್ನು ಎಂದೂ ಕೇಳಿಸಿಕೊಳ್ಳುವುದಿಲ್ಲ.
ಕಾಲಾತೀತದಲ್ಲಿ ಯಾವ ಜೊತೆಗಾರನೂ
ಆ ತೀವ್ರ ವೇದನೆಯನ್ನು ಕೇಳಿಸಿಕೊಳ್ಳಲಿಲ್ಲ.
ಆ ಉಗ್ರ ಹಿಂಸೆಯನ್ನು ಯಾವ ಹೃದಯವು ಹಂಚಿಕೊಳ್ಳಲಿಲ್ಲ
ಅವನ ಭಯಾನಕ ಕತ್ತಲಲ್ಲಿ, ಭೂತದಂತೆ ಪದೇ ಪದೇ ಕಾಣಿಸಿಕೊಳ್ಳುತ್ತದೆ.
ಯಾವುದೋ ಲೋಹದ ಸದ್ದಿನ ಮೂಲಕ ಬೆಳಕು ಹರಿಯುತ್ತದೆ
ಬೇರೆ ಯಾವ ಕಣ್ಣೂ ಗುರುತಿಸದಂತೆ.
ಮಾಂಸಖಂಡಗಳನ್ನು, ತೀವ್ರ ಬಯಕೆಯ ಮಾಂಸಖಂಡಗಳೊಡನೆ ಸೇರಿಸಿದಾಗ
ಮತ್ತು ಶಬ್ದಗಳೆಲ್ಲವೂ ಸರಾಗವಾಗಿ, ಬೆಚ್ಚಗೆ ಹಾಯಾಗಿ ಓಡುವಾಗ,
ನನಗನ್ನಿಸುತ್ತದೆ, ಅವನು ಆಗ ಒಬ್ಬಂಟಿ ಎಂದು
ತಲೆ ಬುರುಡೆಯಲ್ಲಿ ಸೆರೆಯಾದವನೆಂದು.
ಜಾಲರಿಯಲ್ಲಿ ಹಿಡಿಯಲಾದ ರಕ್ತನಾಳಗಳು
ಮೃದು ಹೊದಿಕೆಯ ಕಣಗಳಿಂದ ಕೂಡಿದ ಎಲುಬುಗಳು,
ಅವನು ಏಕಾಂಗಿಯಾಗುತ್ತಾನೆ, ಯಾವಾಗ
ಅವನು ಏಕಾಂಗಿಯಲ್ಲವೆಂದು ನಟಿಸುತ್ತಾನೋ ಆಗ.
ನಾವು ಅವರನ್ನು ಬಂಧಮುಕ್ತರನ್ನಾಗಿಸುತ್ತೇವೆ
ಆ ದುರಂತವನ್ನು ಸಂಯಮದಿಂದ ಸಹಿಸಿಕೊಳ್ಳಬಹುದು
ನೀನು ಮಾತ್ರ ನನ್ನ ತಲೆ ಬುರುಡೆಯನ್ನು ತೆರೆದಿಟ್ಟಾಗ,
ಅಥವಾ ನಾನು ನಿಧಾನವಾಗಿ ನಿನ್ನ ತಲೆ ಬುರುಡೆಗೆ ಪ್ರವೇಶಿಸುತ್ತೇನೆ.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
May 27, 2009
ಆತ್ಮಾವಲೋಕನದ ಪ್ರತಿಬಿಂಬ
ನನ್ನ ಜೀವನದುದ್ದಕ್ಕೂ ಬೇಜವಾಬ್ದಾರಿಯಾಗಿ, ಜುಮ್ಮಂಥ ನಿಶ್ಚಿಂತೆಯಾಗಿ ಇರಬಹುದಿತ್ತು
ಬದುಕಿ ಉಳಿಯುದಕ್ಕಾಗಿಯೇ ಇವೆಲ್ಲವನ್ನೂ ಮಾಡಬೇಕಾದ ಅನಿವಾರ್ಯತೆ,
ನಿಜವಾಗಲೂ ಇದೊಂದು ಅನಗತ್ಯ ಕಿರುಕುಳ.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ಬದುಕಿ ಉಳಿಯುದಕ್ಕಾಗಿಯೇ ಇವೆಲ್ಲವನ್ನೂ ಮಾಡಬೇಕಾದ ಅನಿವಾರ್ಯತೆ,
ನಿಜವಾಗಲೂ ಇದೊಂದು ಅನಗತ್ಯ ಕಿರುಕುಳ.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ನಾನಿಂದು ಪ್ರಾರ್ಥನಾ ಮಂದಿರಕ್ಕೆ ಹೋಗಲಿಲ್ಲ
ನಾನಿಂದು ಪ್ರಾರ್ಥನಾ ಮಂದಿರಕ್ಕೆ ಹೋಗಲಿಲ್ಲ,
ದೇವರು, ನನ್ನನ್ನು ಅರ್ಥಮಾಡಿಕೊಳ್ಳುತ್ತಾನೆಂದು ನಂಬಿದ್ದೇನೆ
ಕಡಲಕಿನಾರೆಯಲ್ಲಿ ನೀಲಿ ಹಾಗು ಬಿಳಿ ಬಣ್ಣದ ಅಲೆಗಳು ನೊರೆಯೆಬ್ಬಿಸಿ ಸುತ್ತುತ್ತಿವೆ,
ಮಕ್ಕಳು ಸುತ್ತಾಡುತ್ತಿದ್ದಾರೆ ಯಥೇಚ್ಛವಾದ ಮರಳ ದಂಡೆಗಳಲ್ಲಿ.
ಅವನಿಗೆ ಗೊತ್ತಿದೆ, ನಿಜವಾಗಲೂ ಅವನಿಗೆ ಗೊತ್ತಿದೆ
ನಾನಿಲ್ಲಿರುವುದು ಬಹಳ ಕಡಿಮೆ ಸಮಯಕ್ಕೆ ಮಾತ್ರ ಸೀಮಿತವೆಂದು,
ಬೇಸಿಗೆ ವಿರಾಮದ ವಿಶ್ರಾಂತಿಯೂ ಸಹ ಸ್ವಲ್ಪ ಸಮಯದಲ್ಲೇ ಹೇಗೆ ಮುಗಿದೇ ಹೋಯಿತಲ್ಲಾ,
ಅವನಿಗೆ ತಿಳಿದಿದೆ, ನಾನು ಎಲ್ಲವೂ ಹೇಳಿ, ಮುಗಿಸಿದ ನಂತರ
ನಮಗೆ ಜೊತೆಯಲ್ಲೇ ಇರಲು ಸಾಕಷ್ಟು ಸಮಯ ಸಿಗುವುದೆಂದು.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ದೇವರು, ನನ್ನನ್ನು ಅರ್ಥಮಾಡಿಕೊಳ್ಳುತ್ತಾನೆಂದು ನಂಬಿದ್ದೇನೆ
ಕಡಲಕಿನಾರೆಯಲ್ಲಿ ನೀಲಿ ಹಾಗು ಬಿಳಿ ಬಣ್ಣದ ಅಲೆಗಳು ನೊರೆಯೆಬ್ಬಿಸಿ ಸುತ್ತುತ್ತಿವೆ,
ಮಕ್ಕಳು ಸುತ್ತಾಡುತ್ತಿದ್ದಾರೆ ಯಥೇಚ್ಛವಾದ ಮರಳ ದಂಡೆಗಳಲ್ಲಿ.
ಅವನಿಗೆ ಗೊತ್ತಿದೆ, ನಿಜವಾಗಲೂ ಅವನಿಗೆ ಗೊತ್ತಿದೆ
ನಾನಿಲ್ಲಿರುವುದು ಬಹಳ ಕಡಿಮೆ ಸಮಯಕ್ಕೆ ಮಾತ್ರ ಸೀಮಿತವೆಂದು,
ಬೇಸಿಗೆ ವಿರಾಮದ ವಿಶ್ರಾಂತಿಯೂ ಸಹ ಸ್ವಲ್ಪ ಸಮಯದಲ್ಲೇ ಹೇಗೆ ಮುಗಿದೇ ಹೋಯಿತಲ್ಲಾ,
ಅವನಿಗೆ ತಿಳಿದಿದೆ, ನಾನು ಎಲ್ಲವೂ ಹೇಳಿ, ಮುಗಿಸಿದ ನಂತರ
ನಮಗೆ ಜೊತೆಯಲ್ಲೇ ಇರಲು ಸಾಕಷ್ಟು ಸಮಯ ಸಿಗುವುದೆಂದು.
ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
Feb 26, 2009
ಪತಿರಾಯರಿಗೊಂದು ಪಿಸುಮಾತು
ನಿಮ್ಮ ವೈವಾಹಿಕ ಜೀವನವು ಪ್ರೀತಿಯ ಬಟ್ಟಲ್ಲಲ್ಲಿ
ತುಂಬಿ ತುಳುಕಬೇಕಾದರೆ,
ನೀವು ತಪ್ಪು ಮಾಡಿದಾಗ, ತಕ್ಷಿಣ ಒಪ್ಪಿಕೊಳ್ಳಿ;
ನೀವು ಸರಿಯೆಂದೆನಿಸಿದಾಗ, ತೆಪ್ಪಗೆ ಬಾಯಿ ಮುಚ್ಚಿಕೊಂಡಿರಿ.
ಮೂಲಕವಿ: ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
ತುಂಬಿ ತುಳುಕಬೇಕಾದರೆ,
ನೀವು ತಪ್ಪು ಮಾಡಿದಾಗ, ತಕ್ಷಿಣ ಒಪ್ಪಿಕೊಳ್ಳಿ;
ನೀವು ಸರಿಯೆಂದೆನಿಸಿದಾಗ, ತೆಪ್ಪಗೆ ಬಾಯಿ ಮುಚ್ಚಿಕೊಂಡಿರಿ.
ಮೂಲಕವಿ: ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ
Subscribe to:
Posts (Atom)