Jun 4, 2009

ಬಿಂಬ – 16

“ಶುದ್ಧ ಪ್ರಾಮಾಣಿಕತೆ
ಶುದ್ಧ ಮೂರ್ಖತನ”
ತಪ್ಪಿದ್ದರೆ ಕ್ಷಮಿಸಿ.

ಬಿಂಬ – 15

ಅಮೂರ್ತ ನರಕದ
ಮೂರ್ತ ಪ್ರತಿರೂಪಗಳ
ಕಡೆಗೆಣಿಸುತ್ತಾ ಕೇಡಿನ
ಕಾರ್ಯದಲ್ಲಿ ಮಗ್ನರಾಗಿ
ಮೈಮರೆತ ಸಂದರ್ಭದಲ್ಲಿ
ಪ್ರಕೃತಿಯ ವಿಕೋಪವು
ರುದ್ರ ತಾಂಡವವಾಡತ್ತದೆ.

ಬಿಂಬ – 14

ಸುಭದ್ರ,
ಸುಖಕರ,
ಮತ್ತು ಸಂತಸದ
ಭವಿಷ್ಯಕ್ಕಾಗಿ
ಈ ಸುಂದರ
ವರ್ತಮಾನ
ವ್ಯರ್ಥ
ಮಾಡುವುದು
ಶುದ್ಧ
ಮೂರ್ಖತನ.

ಬಿಂಬ – 13

ಹಣವೆಂಬುದು
ಎಲ್ಲರಿಗೂ ಅತ್ಯಗತ್ಯ
ಆದರೆ, ಎಷ್ಟು ಎಂಬುದರ
ಸ್ಪಷ್ಟ ತಿಳುವಳಿಕೆಯೊಂದಿಗೆ,
ಅದಕ್ಕೆ ಬದ್ಧನಾಗಿರದಿದ್ದರೆ,
ಬದುಕು ಪಾದರಸದಂತೆ
ಜಾರಿ ಹೋಗುವುದು
ನಿಸ್ಸಂಶಯ.

ಬಿಂಬ – 12

ತಂತ್ರಜ್ಞಾನದ
ಅಗತ್ಯತೆ ಎಷ್ಟು,
ಹೇಗೆ, ಏಕೆ, ಮತ್ತು
ಯಾವುದು, ಯಾವಾಗ
ಎಂಬುದರ ಸ್ಪಷ್ಟ ಅರಿವು
ಮತ್ತೆ ನಿಲುವು ಇಲ್ಲದಿದ್ದರೆ
ಭರಿಸಲಾಗದ ನಷ್ಟ
ಮನುಕುಲಕ್ಕೆ
ಶತಃಸಿದ್ಧ.

ಬಿಂಬ – 11

ಅಸಹಾಯಕರಿಗೆ
ಮತ್ತು ಅಸಮರ್ಥರಿಗೆ
ಸಹಾಯ ಮಾಡುವ
ಸಾಮರ್ಥ್ಯವೊಂದಿದ್ದೂ,
ಇಚ್ಛಾಸಕ್ತಿಯ ಕೊರತೆಯಿಂದಾಗಿ,
ಅಥವಾ ಸ್ವಾರ್ಥದಿಂದಾಗಿ
ಸಾಧ್ಯವಾದಷ್ಟಾನ್ನಾದರೂ
ಮಾಡದಿರುವುದೊಂದು
ಅಕ್ಷಮ್ಯ ಅಪರಾಧ
ಮತ್ತು ವಿಕೃತಿ.