ನನ್ನ ನೆರಳಿಗೆ ಮುಪ್ಪಿಲ್ಲ,
ನೆನಪುಗಳಂತೆ
ಇವರು ನನ್ನ ಎಂದೂ ತೊರೆಯಲೊಲ್ಲದ,
ತಕರಾರಿಲ್ಲದ ಜೊತೆಗಾರರು.
ಇವರೊಂದಿಗೆ ನಿತ್ಯ ಬಂದು ಹೋಗುವ
ಆತ್ಮೀಯ ಅತಿಥಿ
ಕನಸು.
ಹಗಲಿಗೆ ನೆರಳು, ನೆನಪು
ಇರುಳಿಗೊಂದು ಕನಸು.
ಇವರೆ,
ನನ್ನೊಂದಿಗೆ ಹುಟ್ಟಿಸಾಯುವ
ಅಸಹಾಯಕರೊ, ಅದೃಷ್ಟವಂತರೊ
ಇಲ್ಲಾ ಯಾವದೋ ಅನಿವಾರ್ಯತೆಯ ಸೃಷ್ಟಿ
ಅವರಂತೆ ನಾನು...
Dec 14, 2009
Dec 11, 2009
ಬಿಂಬ : 46 – 50
ಬಿಂಬ – 46
ಕಲ್ಲು ಬೀಸಿದ್ದು ಕಾಯಿಗೆ
ಬಿದ್ದದ್ದು ಹಣ್ಣು
ನಂತರ ಪಾಪ ಪಶ್ಚಾತ್ತಾಪ...
ಬಿಂಬ – 47
ಎಲ್ಲರನ್ನೂ ನಿರಂತರ
ಕಾಡುವುದು ಯಾವುದಾದರೂ
ಒಂದು ಹಸಿವು...
ಬಿಂಬ – 48
ನಲ್ಲೆ
ಚಳಿಗಾಲದಲ್ಲಿ
ಎಲ್ಲದಕ್ಕೂ ಮಿಗಿಲು
ನಿನ್ನ ಆಲಿಂಗನ
ಬಿಂಬ – 49
ಒಮ್ಮೆಗೆ,
ಸ್ವರ್ಗವನ್ನೂ ಸಹ ಮರೆಯಬಹುದು,
ಕಾವ್ಯ, ಮದ್ಯ, ಇಲ್ಲಾ ಮಹಿಳೆ
ಸದಾ ಇವರ ನಶೆಯಲ್ಲಿರುವವರು.
ಮತ್ತೆ ಇವರನ್ನು ಕಂಡಾಗ
ಬಹಳ ಸಭ್ಯರೂ ಕೂಡ ತೀವ್ರ ಅಸೂಯೆಯಿಂದ,
ತಮ್ಮ ಅಸಹಾಯಕತೆಗೆ ಮರುಗುತ್ತಾರೆ.
ಬಿಂಬ – 50
ಕ್ಷಮಿಸಿ...
ಕಾಫಿ, ಸಿಗರೇಟ್, ಗರ್ಭನಿರೋಧಕಗಳು
ಮತ್ತೆ ಎಲ್ಲಕ್ಕಿಂತಲೂ ಮುಖ್ಯವಾಗಿ ಮದ್ಯಸಾರ!
ಪ್ರತಿ ಚಳಿಗಾಲದಲ್ಲಿ ತಮ್ಮ ನಿರಂಕುಶ ಅಧಿಕಾರ ಚಲಾಯಿಸುತ್ತವೆ.
ಕಲ್ಲು ಬೀಸಿದ್ದು ಕಾಯಿಗೆ
ಬಿದ್ದದ್ದು ಹಣ್ಣು
ನಂತರ ಪಾಪ ಪಶ್ಚಾತ್ತಾಪ...
ಬಿಂಬ – 47
ಎಲ್ಲರನ್ನೂ ನಿರಂತರ
ಕಾಡುವುದು ಯಾವುದಾದರೂ
ಒಂದು ಹಸಿವು...
ಬಿಂಬ – 48
ನಲ್ಲೆ
ಚಳಿಗಾಲದಲ್ಲಿ
ಎಲ್ಲದಕ್ಕೂ ಮಿಗಿಲು
ನಿನ್ನ ಆಲಿಂಗನ
ಬಿಂಬ – 49
ಒಮ್ಮೆಗೆ,
ಸ್ವರ್ಗವನ್ನೂ ಸಹ ಮರೆಯಬಹುದು,
ಕಾವ್ಯ, ಮದ್ಯ, ಇಲ್ಲಾ ಮಹಿಳೆ
ಸದಾ ಇವರ ನಶೆಯಲ್ಲಿರುವವರು.
ಮತ್ತೆ ಇವರನ್ನು ಕಂಡಾಗ
ಬಹಳ ಸಭ್ಯರೂ ಕೂಡ ತೀವ್ರ ಅಸೂಯೆಯಿಂದ,
ತಮ್ಮ ಅಸಹಾಯಕತೆಗೆ ಮರುಗುತ್ತಾರೆ.
ಬಿಂಬ – 50
ಕ್ಷಮಿಸಿ...
ಕಾಫಿ, ಸಿಗರೇಟ್, ಗರ್ಭನಿರೋಧಕಗಳು
ಮತ್ತೆ ಎಲ್ಲಕ್ಕಿಂತಲೂ ಮುಖ್ಯವಾಗಿ ಮದ್ಯಸಾರ!
ಪ್ರತಿ ಚಳಿಗಾಲದಲ್ಲಿ ತಮ್ಮ ನಿರಂಕುಶ ಅಧಿಕಾರ ಚಲಾಯಿಸುತ್ತವೆ.
Nov 24, 2009
ಮತ್ತೆ ಬರುವನು ಚಂದಿರ - 39
ವಿಲಕ್ಷಣ ಬಂಧಗಳ ಧಾವಂತ
ಹಂತಹಂತವಾಗಿ ಹತನಾಗುತ
ಮೂಡಣ ಪಡುವಣಗಳ ವಸಂತ
ಜೊತೆಗೆ ಬರುವುದೆ ಚಂದಿರ
ಸತತ ಕಾಡುವ ಪ್ರೇಮಭಂಗ
ಕಿತ್ತು ತಿನ್ನುವ ಸ್ವಾರ್ಥರಸಂಗ
ಅನುದಿನವು ಅದೇ ರಣರಂಗ
ನಿಟ್ಟುಸಿರಿಡುವಾಸೆ ಚಂದಿರ
ನಿತ್ಯ ಜೂಜಿನ ಸೆಳೆತದಿಂದ
ಸಂಜೆ ಮದ್ಯದ ಸ್ನೇಹಬಂಧ
ಸತತ ಸೋಲಿನ ಚಡಿಯೇಟು
ಚಿತ್ತ ಚಿಗುರುವುದೆ ಚಂದಿರ
ಸೂಕ್ಷ್ಮ ಸಂವೇದಿಗಳ ಗ್ರಹಿಸದೆ
ಆತ್ಮರತಿಯನು ಅನುಭವಿಸದೆ
ವಿವೇಚನೆಗೆ ಅವಕಾಶ ನೀಡದೆ
ನೋಡು ಬೆಪ್ಪನಾಗಿಹೆ ಚಂದಿರ
ಸಂಕಟ, ಅಪಮಾನಗಳ ಸಾಲು
ನಿರಾಶೆ, ಹತಾಶೆಯ ವಿಷವರ್ತುಲ
ಕದಡಿದ ಚಿತ್ತ ಹಾರಿದೆ ಎತ್ತೆತ್ತಲೊ
ಹುಡುಕಿ ಕೊಡುವೆಯಾ ಚಂದಿರ
ಬದುಕಿನ ಸರಳ ವಿವರಗಳೆಲ್ಲ
ಮರೆಯಾದವೊ ಬಿರುಗಾಳಿಗೆ
ಪಾನಮತ್ತನ ಚಿತ್ತ ಚದುರಿದೆ
ಇನ್ನು ಸಹಿಸಿಲಾಗದೆ ಚಂದಿರ
ಹೆಣ್ಣು, ಹೊನ್ನು, ಮಣ್ಣುಗಳ
ನಿರಂತರ ಸೆಳೆತಕೆ ಸಿಲುಕಿ
ಮತಿಹೀನನಾದವನಿಗೆ ಮುಕ್ತಿ
ಸಿಗದೆ ತತ್ತರಿಸುವ ಚಂದಿರ
ಖಿನ್ನತೆಯಿಂದ ಪಾರಾಗಲು
ಮದ್ಯಸಾರವೆ ನಿತ್ಯ ನೈವೇದ್ಯ
ಬೆನ್ನಟ್ಟಿ ಬರುವ ಭೂತಗಳಿಂದ
ಪಾರಾಗ ಬಲ್ಲನೆ ಚಂದಿರ
ವಿಪರೀತ ನಿರೀಕ್ಷೆಯ ಪ್ರತಿಫಲ
ತಾರಾಫಲದ ದಿಗ್ದರ್ಶನದ ಬಲ
ಸಾಕ್ಷಿಪ್ರಜ್ಞೆ ತೊರೆದ ಅಂತರಾತ್ಮ
ಸ್ವಯಂಕೃತ ಅಪರಾಧ ಚಂದಿರ
ಜೀವನಪ್ರೀತಿಯನ್ನು ತೊರೆದು
ಮಾನವಪ್ರೀತಿಯನ್ನು ಮರೆತು
ತೆರೆದಿಡುವ ತುಡಿತಕೆ ಹಿಂಜರಿದು
ಪಲಾಯನ ಮಾಡಿದೆ ಚಂದಿರ
ಹಂತಹಂತವಾಗಿ ಹತನಾಗುತ
ಮೂಡಣ ಪಡುವಣಗಳ ವಸಂತ
ಜೊತೆಗೆ ಬರುವುದೆ ಚಂದಿರ
ಸತತ ಕಾಡುವ ಪ್ರೇಮಭಂಗ
ಕಿತ್ತು ತಿನ್ನುವ ಸ್ವಾರ್ಥರಸಂಗ
ಅನುದಿನವು ಅದೇ ರಣರಂಗ
ನಿಟ್ಟುಸಿರಿಡುವಾಸೆ ಚಂದಿರ
ನಿತ್ಯ ಜೂಜಿನ ಸೆಳೆತದಿಂದ
ಸಂಜೆ ಮದ್ಯದ ಸ್ನೇಹಬಂಧ
ಸತತ ಸೋಲಿನ ಚಡಿಯೇಟು
ಚಿತ್ತ ಚಿಗುರುವುದೆ ಚಂದಿರ
ಸೂಕ್ಷ್ಮ ಸಂವೇದಿಗಳ ಗ್ರಹಿಸದೆ
ಆತ್ಮರತಿಯನು ಅನುಭವಿಸದೆ
ವಿವೇಚನೆಗೆ ಅವಕಾಶ ನೀಡದೆ
ನೋಡು ಬೆಪ್ಪನಾಗಿಹೆ ಚಂದಿರ
ಸಂಕಟ, ಅಪಮಾನಗಳ ಸಾಲು
ನಿರಾಶೆ, ಹತಾಶೆಯ ವಿಷವರ್ತುಲ
ಕದಡಿದ ಚಿತ್ತ ಹಾರಿದೆ ಎತ್ತೆತ್ತಲೊ
ಹುಡುಕಿ ಕೊಡುವೆಯಾ ಚಂದಿರ
ಬದುಕಿನ ಸರಳ ವಿವರಗಳೆಲ್ಲ
ಮರೆಯಾದವೊ ಬಿರುಗಾಳಿಗೆ
ಪಾನಮತ್ತನ ಚಿತ್ತ ಚದುರಿದೆ
ಇನ್ನು ಸಹಿಸಿಲಾಗದೆ ಚಂದಿರ
ಹೆಣ್ಣು, ಹೊನ್ನು, ಮಣ್ಣುಗಳ
ನಿರಂತರ ಸೆಳೆತಕೆ ಸಿಲುಕಿ
ಮತಿಹೀನನಾದವನಿಗೆ ಮುಕ್ತಿ
ಸಿಗದೆ ತತ್ತರಿಸುವ ಚಂದಿರ
ಖಿನ್ನತೆಯಿಂದ ಪಾರಾಗಲು
ಮದ್ಯಸಾರವೆ ನಿತ್ಯ ನೈವೇದ್ಯ
ಬೆನ್ನಟ್ಟಿ ಬರುವ ಭೂತಗಳಿಂದ
ಪಾರಾಗ ಬಲ್ಲನೆ ಚಂದಿರ
ವಿಪರೀತ ನಿರೀಕ್ಷೆಯ ಪ್ರತಿಫಲ
ತಾರಾಫಲದ ದಿಗ್ದರ್ಶನದ ಬಲ
ಸಾಕ್ಷಿಪ್ರಜ್ಞೆ ತೊರೆದ ಅಂತರಾತ್ಮ
ಸ್ವಯಂಕೃತ ಅಪರಾಧ ಚಂದಿರ
ಜೀವನಪ್ರೀತಿಯನ್ನು ತೊರೆದು
ಮಾನವಪ್ರೀತಿಯನ್ನು ಮರೆತು
ತೆರೆದಿಡುವ ತುಡಿತಕೆ ಹಿಂಜರಿದು
ಪಲಾಯನ ಮಾಡಿದೆ ಚಂದಿರ
Nov 17, 2009
ಮತ್ತೆ ಮತ್ತೆ ಕಾಡುವ ಬಾಪೂ, ಥೆರೆಸಾ...
ನಿಮ್ಮ ಸರಳತೆ, ನಿಸ್ವಾರ್ಥ ಸೇವೆ, ಆ ಮುಕ್ತ ಪ್ರೀತಿ, ತತ್ವ-ಸಿದ್ಧಾಂತ
ಮತ್ತು ಆದರ್ಶಗಳ ಕಿಂಚಿತ್ ಪರಿಚಯವೂ ಸಹ
ನಮಗೆ ನಿಜವಾಗಲೂ ಇರಬಾರದಿತ್ತು.
ಇದರೊಂದಿಗೆ ಖಂಡಿತವಾಗಿ,
ಇತಿಹಾಸವೇ ಇಲ್ಲದ ನೆಲೆಯಲ್ಲಿ ಮಾತ್ರ
ನಾವು ಹುಟ್ಟಬೇಕಾಗಿತ್ತು, ಹಾ...ಇತಿಹಾಸವಿಲ್ಲದ ನೆಲದಲ್ಲಿ...
ಏಕೆಂದರೆ,
ಆಗ ಮಾತ್ರ...ನಿಜವಾಗಲೂ ಆಗ ಮಾತ್ರ
ನಮಗೆ ನಿಸ್ಸಂಕೋಚವಾಗಿ ಅನುಭವಿಸಲು,
ಎಳ್ಳಷ್ಟೂ ಸಂದೇಹವಿಲ್ಲದೆ ಒಪ್ಪಿಕೊಳ್ಳಲು ಸಾಧ್ಯವಿತ್ತು
ಈ ಪ್ರಸಕ್ತ ಕಾಲಮಾನದಲ್ಲಿ ಘಟಿಸುವ ಎಲ್ಲ ದುಷ್ಕೃತ್ಯಗಳನ್ನೂ
ಸಹಜವೇ ಎಂಬಂತೆ, ತೀರಾ ಸ್ವಾಭಾವಿಕವೆನ್ನುವಂತೆ
ಯಾವ ಅಡಚನೆಯೂ ಇಲ್ಲದೆ, ನಿಬಂಧನೆಗಳೂ ಇಲ್ಲದೆ ಸ್ವೀಕರಿಸಬಹುದಿತ್ತು.
ನಮಸ್ತೆ,
ಬಾಪೂ, ಥೆರೆಸಾ!
ಖಂಡಿತ ನಾನು ಬಲ್ಲೆ
ನಿಮಗಿನ್ನೂ ಕೇಳಿಸಿಕೊಳ್ಳುವ ಸಂಯಮವಿದೆಯೆಂದು?
ಆದ್ದರಿಂದಲೇ ನಾನು ಸಾಧ್ಯವಾದಷ್ಟು ಗಟ್ಟಿಯಾಗಿಯೇ ಹೇಳಬಯಸುವೆ
ನೀವಿಬ್ಬರೂ ಅತೀ ದೊಡ್ಡ ತಪ್ಪುಮಾಡಿದ್ದೀರಿ,
ದುರದೃಷ್ಟವಶಾತ್ ನೀವು ಇದೇ ಈ ನೆಲದಲ್ಲೇ ಹುಟ್ಟಿ,
ಅಗಾಧವಾದ ಅಸಾಧ್ಯತೆಗಳೆಲ್ಲವನ್ನೂ ಸರಳವೆನ್ನುವಷ್ಟು ಸಲೀಸಾಗಿ ಸಾಧಿಸಿ, ಸಾಧ್ಯವಾಗಿಸಿ
ಹಾಗೇ ನೆಮ್ಮದಿಯಾಗಿ ಯಾರೂ ಅರಿಯದ ಯಾವುದೋ ಶ್ರೇಷ್ಠ ಗೂಡಿಗೆ ಹಾರಿ ಬಿಟ್ಟಿದ್ದೀರಿ,
ಹೀಗೆ ನಮ್ಮನ್ನು ನಿರಂತರವಾಗಿ ಎಂದೂ ಕಂಡರಿಯದಂತೆ ಎಡಬಿಡದೆ ಕಾಡುತ್ತಾ ಅಜರಾಮರರಾಗಿ...
ಈಗ,
ಕೇಳಿಸಿಕೊಳ್ಳಿ...ನೀವು ಕೇಳಿಸಿಕೊಳ್ಳಲೇ ಬೇಕು
ಜನಸಾಮಾನ್ಯರನ್ನಾಳುವ ಆಪ್ತ ಅರಸರೇ
ಸಾಮಾನ್ಯರಿಗೆ...ಶ್ರೀಸಾಮಾನ್ಯರಿಗೆ...ಗತಿಯಿಲ್ಲದವರಿಗೆಲ್ಲಾ
ಜನನಾಯಕರೆಂದೆನಿಸಿಕೊಂಡಿರುವ ಅಗ್ರಗಣ್ಯರೇ
ನಿಮ್ಮಿಂದ ಕೂಡಲೇ ಒಂದು ಮುಖ್ಯ, ಬಹಳ ಮುಖ್ಯ ಕಾರ್ಯ ಆಗಬೇಕಾಗಿದೆ
ಇದರಲ್ಲಿ ಖಂಡಿತ ಆಯ್ಕೆಯ ಅವಕಾಶವೂ ಸಹ ನಿಮಗಿರುತ್ತದೆ...ಅದೇನೆಂದರೆ
ಒಂದೋ, ನೀವು ಬಾಪೂ, ಥೆರೆಸಾ ಇವರಿಬ್ಬರ ನೆನಪಿಲ್ಲದಂತೆ, ಜೊತೆಗೆ ಸಮಗ್ರ ಇತಿಹಾಸದ
ಲವಲೇಶವೂ ಉಳಿಸದಂತೆ ಕೂಡಲೇ ದ್ವಂಸಮಾಡಿ.
ಇಲ್ಲಾ,
ಆ ದೇವರ ಕೃಪೆಯಿಂದ ದಯಮಾಡಿ
ಈ ಅಸಹಾಯಕರೆಲ್ಲರ ಜೊತೆಗೆ ಅಮಾಯಕರನ್ನೂ ಸೇರಿಸಿ,
ಇವರೆಲ್ಲರ ಇರುವನ್ನು ಇನ್ನಿಲ್ಲದಂತೆ ನಾಶಮಾಡಿ,
ಮತ್ತೆಂದೂ ಹುಟ್ಟಿಬರಲು ಸಾಧ್ಯವೇ ಇಲ್ಲದಂತೆ
ಒಮ್ಮೆಗೇ ಕೊಚ್ಚಿಹಾಕಿ...
ಮತ್ತು ಆದರ್ಶಗಳ ಕಿಂಚಿತ್ ಪರಿಚಯವೂ ಸಹ
ನಮಗೆ ನಿಜವಾಗಲೂ ಇರಬಾರದಿತ್ತು.
ಇದರೊಂದಿಗೆ ಖಂಡಿತವಾಗಿ,
ಇತಿಹಾಸವೇ ಇಲ್ಲದ ನೆಲೆಯಲ್ಲಿ ಮಾತ್ರ
ನಾವು ಹುಟ್ಟಬೇಕಾಗಿತ್ತು, ಹಾ...ಇತಿಹಾಸವಿಲ್ಲದ ನೆಲದಲ್ಲಿ...
ಏಕೆಂದರೆ,
ಆಗ ಮಾತ್ರ...ನಿಜವಾಗಲೂ ಆಗ ಮಾತ್ರ
ನಮಗೆ ನಿಸ್ಸಂಕೋಚವಾಗಿ ಅನುಭವಿಸಲು,
ಎಳ್ಳಷ್ಟೂ ಸಂದೇಹವಿಲ್ಲದೆ ಒಪ್ಪಿಕೊಳ್ಳಲು ಸಾಧ್ಯವಿತ್ತು
ಈ ಪ್ರಸಕ್ತ ಕಾಲಮಾನದಲ್ಲಿ ಘಟಿಸುವ ಎಲ್ಲ ದುಷ್ಕೃತ್ಯಗಳನ್ನೂ
ಸಹಜವೇ ಎಂಬಂತೆ, ತೀರಾ ಸ್ವಾಭಾವಿಕವೆನ್ನುವಂತೆ
ಯಾವ ಅಡಚನೆಯೂ ಇಲ್ಲದೆ, ನಿಬಂಧನೆಗಳೂ ಇಲ್ಲದೆ ಸ್ವೀಕರಿಸಬಹುದಿತ್ತು.
ನಮಸ್ತೆ,
ಬಾಪೂ, ಥೆರೆಸಾ!
ಖಂಡಿತ ನಾನು ಬಲ್ಲೆ
ನಿಮಗಿನ್ನೂ ಕೇಳಿಸಿಕೊಳ್ಳುವ ಸಂಯಮವಿದೆಯೆಂದು?
ಆದ್ದರಿಂದಲೇ ನಾನು ಸಾಧ್ಯವಾದಷ್ಟು ಗಟ್ಟಿಯಾಗಿಯೇ ಹೇಳಬಯಸುವೆ
ನೀವಿಬ್ಬರೂ ಅತೀ ದೊಡ್ಡ ತಪ್ಪುಮಾಡಿದ್ದೀರಿ,
ದುರದೃಷ್ಟವಶಾತ್ ನೀವು ಇದೇ ಈ ನೆಲದಲ್ಲೇ ಹುಟ್ಟಿ,
ಅಗಾಧವಾದ ಅಸಾಧ್ಯತೆಗಳೆಲ್ಲವನ್ನೂ ಸರಳವೆನ್ನುವಷ್ಟು ಸಲೀಸಾಗಿ ಸಾಧಿಸಿ, ಸಾಧ್ಯವಾಗಿಸಿ
ಹಾಗೇ ನೆಮ್ಮದಿಯಾಗಿ ಯಾರೂ ಅರಿಯದ ಯಾವುದೋ ಶ್ರೇಷ್ಠ ಗೂಡಿಗೆ ಹಾರಿ ಬಿಟ್ಟಿದ್ದೀರಿ,
ಹೀಗೆ ನಮ್ಮನ್ನು ನಿರಂತರವಾಗಿ ಎಂದೂ ಕಂಡರಿಯದಂತೆ ಎಡಬಿಡದೆ ಕಾಡುತ್ತಾ ಅಜರಾಮರರಾಗಿ...
ಈಗ,
ಕೇಳಿಸಿಕೊಳ್ಳಿ...ನೀವು ಕೇಳಿಸಿಕೊಳ್ಳಲೇ ಬೇಕು
ಜನಸಾಮಾನ್ಯರನ್ನಾಳುವ ಆಪ್ತ ಅರಸರೇ
ಸಾಮಾನ್ಯರಿಗೆ...ಶ್ರೀಸಾಮಾನ್ಯರಿಗೆ...ಗತಿಯಿಲ್ಲದವರಿಗೆಲ್ಲಾ
ಜನನಾಯಕರೆಂದೆನಿಸಿಕೊಂಡಿರುವ ಅಗ್ರಗಣ್ಯರೇ
ನಿಮ್ಮಿಂದ ಕೂಡಲೇ ಒಂದು ಮುಖ್ಯ, ಬಹಳ ಮುಖ್ಯ ಕಾರ್ಯ ಆಗಬೇಕಾಗಿದೆ
ಇದರಲ್ಲಿ ಖಂಡಿತ ಆಯ್ಕೆಯ ಅವಕಾಶವೂ ಸಹ ನಿಮಗಿರುತ್ತದೆ...ಅದೇನೆಂದರೆ
ಒಂದೋ, ನೀವು ಬಾಪೂ, ಥೆರೆಸಾ ಇವರಿಬ್ಬರ ನೆನಪಿಲ್ಲದಂತೆ, ಜೊತೆಗೆ ಸಮಗ್ರ ಇತಿಹಾಸದ
ಲವಲೇಶವೂ ಉಳಿಸದಂತೆ ಕೂಡಲೇ ದ್ವಂಸಮಾಡಿ.
ಇಲ್ಲಾ,
ಆ ದೇವರ ಕೃಪೆಯಿಂದ ದಯಮಾಡಿ
ಈ ಅಸಹಾಯಕರೆಲ್ಲರ ಜೊತೆಗೆ ಅಮಾಯಕರನ್ನೂ ಸೇರಿಸಿ,
ಇವರೆಲ್ಲರ ಇರುವನ್ನು ಇನ್ನಿಲ್ಲದಂತೆ ನಾಶಮಾಡಿ,
ಮತ್ತೆಂದೂ ಹುಟ್ಟಿಬರಲು ಸಾಧ್ಯವೇ ಇಲ್ಲದಂತೆ
ಒಮ್ಮೆಗೇ ಕೊಚ್ಚಿಹಾಕಿ...
Nov 1, 2009
ಬಿಂಬ : 41 - 45
ಬಿಂಬ - 41
ಕಾವ್ಯವನ್ನರಿಯುವ ಸಂಯಮ ಸಿದ್ಧಿಸಿಕೊಂಡರೆ,
ಬದುಕು ಸವಿಯುವ ಸಾಮರ್ಥ್ಯ ಸಾಧಿಸಿದಂತೆ.
ಬಿಂಬ – 42
ತೀವ್ರ ನಿರಾಸೆಗಳಿಂದ ಪಾರಾಗಬೇಕಾದರೆ,
ಮೊದಲು ನಿರೀಕ್ಷೆಗಳನ್ನು ನಿಯಂತ್ರಿಸಬೇಕು.
ಬಿಂಬ - 43
ನಾವೇ ಹೆಣೆದ ಜೇಡರ ಬಲೆಯಲ್ಲಿ ಸೆರೆಯಾಗಿ
ಹೊರಬರಲಾಗದೆ ಒದ್ದಾಡುವುದು ವಿಪರ್ಯಾಸ.
ಬಿಂಬ – 44
ಜಗತ್ತಿನ ಅತಿ ಶ್ರೇಷ್ಠ ಶ್ರೀಮಂತ,
ನಿತ್ಯ ಸಾಹಿತ್ಯ ಸವಿಯುವ ಸಂತ.
ಬಿಂಬ – 45
ಯಶಸ್ಸನ್ನು ಸವಿಯುವ ಹುಮ್ಮಸ್ಸಿನಂತೆ,
ಸೋಲು ಸ್ವೀಕರಿಸುವ ಸಾಮರ್ಥ್ಯ ಅಗತ್ಯ.
ಕಾವ್ಯವನ್ನರಿಯುವ ಸಂಯಮ ಸಿದ್ಧಿಸಿಕೊಂಡರೆ,
ಬದುಕು ಸವಿಯುವ ಸಾಮರ್ಥ್ಯ ಸಾಧಿಸಿದಂತೆ.
ಬಿಂಬ – 42
ತೀವ್ರ ನಿರಾಸೆಗಳಿಂದ ಪಾರಾಗಬೇಕಾದರೆ,
ಮೊದಲು ನಿರೀಕ್ಷೆಗಳನ್ನು ನಿಯಂತ್ರಿಸಬೇಕು.
ಬಿಂಬ - 43
ನಾವೇ ಹೆಣೆದ ಜೇಡರ ಬಲೆಯಲ್ಲಿ ಸೆರೆಯಾಗಿ
ಹೊರಬರಲಾಗದೆ ಒದ್ದಾಡುವುದು ವಿಪರ್ಯಾಸ.
ಬಿಂಬ – 44
ಜಗತ್ತಿನ ಅತಿ ಶ್ರೇಷ್ಠ ಶ್ರೀಮಂತ,
ನಿತ್ಯ ಸಾಹಿತ್ಯ ಸವಿಯುವ ಸಂತ.
ಬಿಂಬ – 45
ಯಶಸ್ಸನ್ನು ಸವಿಯುವ ಹುಮ್ಮಸ್ಸಿನಂತೆ,
ಸೋಲು ಸ್ವೀಕರಿಸುವ ಸಾಮರ್ಥ್ಯ ಅಗತ್ಯ.
Oct 28, 2009
ಹನಿಗಳು - 7
-1-
ಮುಂಗಾರಿನ
ನಡೆ ಏಕೋ
ಮುಖ್ಯಮಂತ್ರಿಗಳ
ನುಡಿಯಂತೆ
ತೋರುತ್ತಿದೆ
ಅಲ್ಲವೆ?
-2-
ರೈತರ
ಉಚಿತ ವಿದ್ಯುತ್
ಕಡಿತ
ಇಂಧನ ಸಚಿವರ
ಶಾಕ್ ಟ್ರೀಟ್ಮೆಂಟ್
ಖಚಿತ
-3-
ಆರೋಗ್ಯ ಸಚಿವರಿಗೆ
ಸತತ ಅನಾರೋಗ್ಯ
ಪ್ರಚಾರ ಕಾರ್ಯಕ್ಕೆ
ಮಾತ್ರ ತಪ್ಪದವರ
ಆಗಮನದ ಭಾಗ್ಯ
-4-
ಸಚಿವೆಯ ಮನೆಯಲ್ಲಿ
ಕುಡಿತ, ಕುಣಿತ,
ಪಟಾಕಿ ಸಿಡಿತ
ಆಡಳಿತ ಪಕ್ಷದಲ್ಲಿ
ತೀವ್ರ ಭಿನ್ನಮತ
-5-
ಗೃಹಲಕ್ಷ್ಮಿ,
ಭಾಗ್ಯಲಕ್ಷ್ಮಿ,
ಆರೋಗ್ಯಲಕ್ಷ್ಮಿ
ಸದ್ಯ
ಸಂತಾನಲಕ್ಷ್ಮಿ
ವರ ನೀಡಲಿಲ್ಲ
ಮಾನ್ಯ
ಮುಖ್ಯ ಮಂತ್ರಿಗಳು
-6-
ಮಠಮಾನ್ಯರಿಗೆ
ಯಥೇಚ್ಛ
ಅನುದಾನ
ನೆರೆಪೀಡಿತರಿಗೆ
ಕೇವಲ
ಸಾಂತ್ವನ
-7-
ಚುನಾವಣಾ ಸಮರ
ಜಾತಿ, ಮತದ ಲೆಕ್ಕಾಚಾರ
ಹಣದ ಅಹಃಕಾರ
ಮದ, ಮತ್ಸರ,
ಮದ್ಯಸಾರದ
ವಿಕೃತ ಸಾಗರ
-8-
ಗೃಹ ಸಚಿವರಿಗೆ
ಭಾರೀ ಗಂಢಾಂತರ
ಆದರೂ ಅಂತಾರೆ
ಮಧ್ಯೆ ನಿಮ್ಮದೇನ್ರಿ
ಅವಾಂತರ
-9-
ಬಂತು ಬಂತು
ಕರೆಂಟು ಬಂತು
ಕೇವಲ
ಇಂಧನ ಸಚಿವರ
ಕನಸಲ್ಲಿ...
-10-
ರಾಜ್ಯದ ಬೊಕ್ಕಸ
ಖಾಲಿ ಖಾಲಿ
ದಿವಾಳಿ...
ಸಚಿವ ಸಂಪುಟಕ್ಕೆ
ಜಾಲಿ ಜಾಲಿ
ದೀಪಾವಳಿ.
Subscribe to:
Posts (Atom)