Dec 31, 2007

ಪ್ರಗತಿಯ ರಥ

ವಿಶೇಷ ಆರ್ಥಿಕ ವಲಯ
ದೇಶದ ಪ್ರಗತಿಗೆ ಆಲಯ
ಈ ಅಸ್ತ್ರವ ಬಳಸಿ ರೈತರನು
ಸಜೀವ ದಹನ ಮಾಡುವರು

ಹಸಿರನು ಅಳಿಸಿ ರಕ್ತವ ಹರಿಸಿ
ಕಟ್ಟಡಗಳ ಕಾಡನು ಕಟ್ಟುವರು
ಬಡವರ ಬಾಳಿಗೆ ಕೊಳ್ಳಿಯನಿಟ್ಟು
ಹಲವರು ಸಿರಿಯಲಿ ಮೆರೆಯುವರು

ದೇಶಕೆ ಬೆನ್ನೆಲುಬು ಈತನು
ಕಾಲದಿ ಭೂಮಿಯ ಒಡೆಯನು
ಹಸಿರನು ಬೆಳೆಸಿ ಬದುಕುವನು
ಭೂಮಿಗೆ ಜೀವ ಬಿಡುವವನು

ಕತ್ತಲ ಕೂಪಕೆ ಬೀಳುವ ಮುನ್ನ
ನೆತ್ತರ ಓಕುಳಿ ಹಾಡುವ ಮುನ್ನ
ಕೃಷಿಕರ ಮನಸನು ಅರಿತು ನೀನು
ಎಳೆಯೋ ಪ್ರಗತಿಯ ರಥವನು

No comments: