Oct 9, 2009

ಸಾಲು - 8

- 1 -
ತೆರಿಗೆ ಕಟ್ಟಿ, ಓಟೂ ಒತ್ತಿ
ಸುತ್ತಿ ಸುತ್ತಿ ಸಲಾಂ ಹೊಡೆದೂ
ಲಂಚ ಕೊಡೊ ಗುಗ್ಗೂಸ್ ಎಂದು ಗುದ್ದಿಸಿಕೊಂಡ್ರೂ...
ತೆಪ್ಪಗಿರೊ ಅಸಹಾಯಕ ಪ್ರಜೆಗಳ ದುಸ್ಥಿತಿ,
ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಮಾನ!

- 2 -
ಜನಸೇವೆಯ ಹೆಸರಲ್ಲಿ
ನಲವತ್ತೆಂಟು ಕೋಟಿ ರೂಗಳ
ಸುಂದರ ವಜ್ರದ ಸುವರ್ಣ ಕಿರೀಟ
ದೂರದ ತಿರುಪತಿ ತಿಮ್ಮಪ್ಪನಿಗೆ!
ಊರಲ್ಲೇ ಭೀಕರ ನೆರೆಯಿಂದ ತತ್ತರಿಸಿ,
ಕೂಳಿಗೂ, ಸೂರಿಗೂ ಪರದಾಡುವ ಜನರ
ಧಾರುಣ ಪರಿಸ್ಥಿತಿಯಲ್ಲೂ ಮನಕರಗದ
ಅಮಾನವೀಯ ಗಣ್ಯ ನಾಯಕರ ನಡೆ
ಬಹಳ ಅಸಹನೀಯವಾದುದು.

- 3 -
ಪ್ರಜಾಸೇವೆ ಪರಮಾತ್ಮನ ಸೇವೆಯೆಂದು
ಪಢಪಢಿಸಿ ತೊದಲುತ್ತಾ...ಬೊಗಳುತ್ತಾ...
ಅಸಹಾಯಕ ಪ್ರಜೆಗಳ ಪೀಡಿಸಿ, ಹಿಂಸಿಸಿ
ಪ್ರಭುಗಳಾಗುವ ವಿಕೃತ ಸಾಧನೆಯಿಂದ...
ಸಂತೃಪ್ತಿ ಸಿದ್ಧಿಸಿಕೊಳ್ಳಲು ಸಾಧ್ಯವೆ?

- 4 -
ಜಾತಿ, ಮತ, ನಾಡು, ನುಡಿ, ದೇಶ
ಇವೆಲ್ಲವನ್ನೂ ಮೀರಿದ ಪಯಣ...
ಪ್ರಕೃತಿಯೊಂದಿಗೆ ಸಕಲ ಜೀವರಾಶಿಗಳ ಸಂರಕ್ಷಣೆ,
ಸಂಕಷ್ಟದಲ್ಲಿ ಸಿಲುಕಿದ ಸಹಪಯಣಿಗರಿಗೆ
ಸೂಕ್ತ ಸ್ಪಂದನೆ, ಸಾಧ್ಯವಾದ ನೆರವಿಂದ
ಮಾನವತ್ವ ಮೆರೆಯುವುದೆ ಮಾನವನ
ಧ್ಯೇಯೋದ್ಧೇಶ, ಸಾಧನೆ, ಸಾರ್ಥಕ.

No comments: