Sep 26, 2011

ಮತ್ತದೇ...


ಒಲ್ಲದ ವಿಷಯಗಳು?
ಒಂದೇ ಸಮ ದಾಡಿಯಿಟ್ಟಿವೆ,
ಯಾರದೋ ಸಾವು ನೋವಿಗೆ
ಕದಡುವ ಮನಸಿಗೆ ಕೊಟ್ಟವರಾರು ಅಪ್ಪಣೆ?
ರಾಡಿಯೆಬ್ಬಿಸಿ, ಉಬ್ಬೇರಿಸುವವರಿಗೆ
ನೀಡಬೇಕೆ ಉತ್ತರ!

ಛೆ,
ದಿನ ಬೆಳಗಾದರೆ ಇದೇ ಗೋಳು.
ಯಾರಿಗೋ ಆಘಾತ, ಅಪಘಾತ,
ಅಪಹರಣ, ಹರಣ,
ಕೊಲೆ, ಕೇಸು, ಕೋರ್ಟು.
ಇದನ್ನೇ ನೋಡುತ್ತಾ,
ಸಂಖ್ಯೆಗಳ ಕೂಡುತ್ತಾ,
ಕಣ್ಮನ ತುಂಬಿಸಿಕೊಳ್ಳುವ
ಕೆಟ್ಟ ಧಾವಂತ.

ಹಸಿವು,
ತಿಂದಷ್ಟೂ ತೀರದ,
ಅಜೀರ್ಣದಿಂದ ವಾಕರಿಕೆಯಾಗಿ,
ಆರೋಗ್ಯ ಹಾಳಾಗಿ ಸತ್ತರೂ ಸೈ,
ಬೇಕು, ಬೇಕು, ಇನ್ನೂ ಬೇಕು.

ಅಬ್ಬಬ್ಬಾ...
ದೋಚಿದ್ದೋ, ದೋಚಿದ್ದು
ಈಗ ಎಚ್ಚೆತ್ತವರು ಜನರೋ,
ಸರಕಾರವೋ, ಇಲ್ಲಾ ನ್ಯಾಯಾಂಗವೋ,
ಇಲ್ಲಾ ಇವರೆಲ್ಲರ ತಲೆಗೆ ಹುಳಬಿಟ್ಟು
ಮಗುಮ್ಮನೆ ನಗುವ ಮಾಧ್ಯಮವೋ?
ಭ್ರಷ್ಟರಿಗೇಕೋ ಕಾಲ ಕೆಟ್ಟಿದೆ,
ಕಂಬಿ ಎಣಿಸುವ ಭಯ,
ಹಾವು-ಏಣಿ ಆಟದ ನಡುವೆ,
ಸಾಮಾನ್ಯನಿಗೊಂದಿಷ್ಟು ನಿಟ್ಟುಸಿರು.
ದಿನ - ರಾತ್ರಿ ಮತ್ತಿವೇ
ಗೋಜು-ಗೊಂದಲಗಳು...

ಈಗಷ್ಟೇ ಕರೆ ಮಾಡಿದ ಗೆಳತಿಗೆ
ಬೇಕಂತೆ ಪೀಝಾ, ಬರ್ಗರ್.
ಅಮ್ಮ ಮಾಡಿದ ಮುದ್ದೆ ಬಸ್ಸಾರಿಗೆ,
ಮತ್ತೆ ಹಳೆಯ ಹಾಡಿಗೆ,
ನನಗಿಲ್ಲ ಯಾವ ತಕರಾರು.

4 comments:

ಸಾಗರದಾಚೆಯ ಇಂಚರ said...

chennagide sir,

dinanityada badukige jeevanta kannadi

ಚಂದಿನ | Chandrashekar said...

ಮೆಚ್ಚುಗೆಗೆ ಧನ್ಯವಾದಗಳು...ಡಾ.ಗುರುಪ್ರಸಾದ್ ಅವರೆ

ಮನಸು said...

tumba chennagide sir istavayitu..

ಚಂದಿನ | Chandrashekar said...

ಧನ್ಯವಾದಗಳು ಮನಸು ಮೇಡಮ್...