ಮೌನವಾಗಿ ಜನನ ಮರುಘಳಿಗೆ ಶುರು ಕದನ
ಮೂಲ ನೆಪವಷ್ಟೇ ಹಿಂದೆ ತಿರುಗದವಳ
ಇನ್ನು ಇರದ ಹಾದಿಯ ಬಗ್ಗೆ ಚಿಂತಿಸುವಳೇ
ಇದ್ದ ಇರದುದರ ಮೇಲೆದ್ದು ನಡೆಯುವವಳ
ಅಡತಡೆಗಳಿಗೆ ಎದೆಗೊಟ್ಟು ಗುಡುಗುವವಳ
ಹಿಂಬಾಲಕರಿಗೆ ಹಿತವ ಬಯಸುತಲೇ
ನಿಲ್ಲದಲೇ ಎಲ್ಲೂ ನಲಿದಾಡುವವಳು
ಜಡಿಮಳೆ ಸದ್ದಿಗೆ ಜಗ್ಗುವವಳಿವಳಲ್ಲ
ಕವಿದ ಕಾರ್ಮೋಡಗಳ ಗುಡುಗು
ಮಿಂಚುಗಳಿವಳಿಗೆ ಹೊಸತಲ್ಲ
ಹಗಲಿರಲಿ ಇರುಳಿರಲಿ ಅದರ ಪರಿವಿಲ್ಲ
ನಿತ್ಯ ನುಸುಳುವ ಛಲವ ಬಿಡಲೊಲ್ಲದೆ
ಬಿಸಿಲಿರಲಿ ನೆರಳಿರಲಿ ನಿರ್ಲಿಪ್ತವೇ ಮುಖದಲ್ಲಿ
ಸಿಕ್ಕ ಸನ್ನಿವೇಶಗಳಿಂದ ಸ್ಪೂರ್ತಿ ಪಡೆಯುತಲೇ
ನೇರ ಮುಖಾಮುಖಿ ಇವಳ ಜಗದ ನಿಯಮ
ಸಿಡುಕು, ಸಿಂಗಾರಗಳ ಕೊರತೆ ಇರದವಳು
ಸರಳ ಸಜ್ಜನಿಕೆಯಿಂದ ನವರಸಗಳ
ರುಚಿಯ ನೀಡುವವಳು
ಬಿಂಕ ಬಿನ್ನಾಣಗಳ ಜೊತೆ ಜೋರು
ಹುಳಿ ಒಗರಿನ ಪೊಗರು ನೆನಪಿರಲಿ
ಸುಳಿಗೆ ಸಿಕ್ಕಿದವರ ಸೆರಗಿನಿಂದ
ಸುತ್ತಿ ಸೆಳೆಯುವಳು ಜೋಕೆ
ಜಾರು ಮನವನು ಬಿಗಿದಿಟ್ಟು
ಎಚ್ಚರದಿ ನಡೆ ನೀನದರ ಬಳಿಗೆ
Apr 21, 2008
Apr 4, 2008
ಎರಡೇ ಎರಡು ತುತ್ತು
ಕಾವೇರಿ ಮಳೆಯ ಕೃಪೆಯಿಂದ
ಈಗ ತಣ್ಣಗಿದ್ದಂತಿದೆ
ಜನತೆಗೆ, ಉಲ್ಲಾಸ, ಉತ್ಸಾಹ
ಹಾಗು ಕುತೂಹಲ ಭರಿತ
ಮನರಂಜನೆಯೊಂದಿಗೆ
ಟ್ವೆಂಟಿ ಟ್ವೆಂಟಿ ಸಿಎಂ ಕಪ್
ಅಮೋಘ ಪ್ರದರ್ಶನ ಕಂಡಿದೆ
ಅತ್ತ ಮೋದಿಯ ಮೋಡಿ
ಇತ್ತ ಮಯಾವತಿ ಮಾಯೆ
ರೈಲು ಲಾಲು ಬಿಟ್ಟ ರೀಲು
ಚಿದಂಬ “ರಂ” ಚಮತ್ಕಾರ
ರಾಜ್ ಠಾಕ್ರೆ ಬಿಹಾರಿ ಬಹಿಷ್ಕಾರ
ಗುಜರಾತ್ ಮಾದರಿ ಅಭಿವೃದ್ಧಿ
ಠಾಕ್ರೆ ಮಾದರಿ ಹೊರಾಟಕ್ಕೆ
ಸ್ಥಳೀಯ ತಳಿಗಳ ತಡಕಾಟ
ಅಲ್ಪವಿರಾಮ ಕಂಡಿದೆ
ಕಮರ್ಷಿಯಲ್ ಬ್ರೇಕ್ ನಂತರ
ಹೊಗೇನಕಲ್ ಜಲಪಾತಕ್ಕೆ
ಈಗ ಜಾತಕ ಕೂಡಿ ಬಂದಿದೆ
ಕೋರ್ಟು, ಕಛೇರಿ ಇದ್ದೇ ಇದೆ
ಎದ್ದು ಬಿದ್ದು, ಬಿದ್ದು ಎದ್ದು
ಸಿಕ್ಕ ಸುವರ್ಣಾವಕಾಶ
ಸುಮ್ಮನಿರಲಾದೀತೆ
ಹೋಟಲ್ ಬಂದ್, ಸಿನಿಮಾ ಬಂದ್
ತಮಿಲು ಚಾನೆಲ್ಲುಗಳು ಗಪ್ ಚುಪ್
ಬಸ್ಸು ಲಾರಿಗಳಿಗೆ ಸಾಕಷ್ಟು ಕಿಕ್
ಅತ್ತ ಮಚ್ಚು, ಇತ್ತ ಲಾಂಗ್
ಇನ್ನೇಕೆ ತಡ ಕೊಚ್ಚು ಮಗ
ಅಸಹಾಯಕ ಬಡವರ
ನೂರು ರೂಪಾಯಿಗೆ
ಸಿಕ್ಕೇ ಸಿಗ್ತಾರ
ಇದ್ದವರು ಜುಮ್... ಅಂಥ ಇರ್ತಾರ
ಬರ್ತಾರ, ಹೇಳ್ತಾರ, ಎದ್ದು ಹೋಗ್ತಾರ
ಇರದವರು ಅನಾಯಸವಾಗಿ,
ಇವರ ಬಲೆಗೆ ಸಿಗ್ತಾರ
ಗುಂಡೀಗೆ ಬೀಳ್ತಾರ
ಬದುಕಿದ್ರೆ ನಗ್ತಾರ
ಇಲ್ದಿದ್ರೆ ಅಟೇ
ಮರಿತ್ಬಿಡ್ತಾರ
ಅಯ್ಯೋ ಶಿವನೇ ಫ್ರೀ ಪಬ್ಲಿಸಿಟೀಗೆ ಇಟೆಲ್ಲಾ ಮಾಡ್ತಾರ
ಇದ್ದ ಬದ್ದ ಚಾನಲ್ಗಳೆಲ್ಲಾ ಇದೇ ತೋರಿಸ್ತಾರ
ಮುಂಜಾನೆ ಪೇಪರ್ನೋರು ಇದೇ ಬರೀತಾರ
ಸಾಲದ್ದಕ್ಕೆ ಬುದ್ಧಿಜೀವಿಗಳು ಸುಮ್ಮನಿರುವರೇ
ಇದನ್ನೇ ವಿಮರ್ಶೆ, ವಿಶ್ಲೇಷಣೆ ಮಾಡಿ
ಉಪ್ಪು, ಖಾರ ಹಾಕಿ ಅವರ
ಹೊಟ್ಟೆ ತುಂಬಿಸ್ಕೊತಾರ
ಮಧ್ಯಮ, ಮೇಲ್ಮಧ್ಯಮ ವರ್ಗದವರು ಇದನ್ನೇ
ಮನರಂಜನೆಗಾಗಿ ನೋಡಿ, ನೋಡಿ
ಅವರ ಕಷ್ಟಗಳ ಸ್ವಲ್ಪ ಮಟ್ಟಿಗೆ
ಸಮಾಧಾನ ಮಾಡ್ಕೊಂಡು
ಅದೇ ಮಾತಾಡ್ತಾ ಮತಾಡ್ತಾ
ದಿನ ದೂಡ್ತಾರ
ಹೆಸರು, ಟಿಕಟ್ಟು, ಮತಗಳು, ಅಧಿಕಾರ ಅವರಿಗೆ,
ಮಾಧ್ಯಮದವರಿಗೆ ಭರ್ಜರಿ ವ್ಯಾಪಾರ
ಜನ ಸಾಮಾನ್ಯರಿಗೆ ಮನರಂಜನೆ
ಮಿಕ್ಕವರಿಗೆ ಅದೃಷ್ಟ ಚೆನ್ನಾಗಿದ್ರೆ
ಎರಡೇ ಎರಡು ತುತ್ತು
ಅಟೇಯ
ಈಗ ತಣ್ಣಗಿದ್ದಂತಿದೆ
ಜನತೆಗೆ, ಉಲ್ಲಾಸ, ಉತ್ಸಾಹ
ಹಾಗು ಕುತೂಹಲ ಭರಿತ
ಮನರಂಜನೆಯೊಂದಿಗೆ
ಟ್ವೆಂಟಿ ಟ್ವೆಂಟಿ ಸಿಎಂ ಕಪ್
ಅಮೋಘ ಪ್ರದರ್ಶನ ಕಂಡಿದೆ
ಅತ್ತ ಮೋದಿಯ ಮೋಡಿ
ಇತ್ತ ಮಯಾವತಿ ಮಾಯೆ
ರೈಲು ಲಾಲು ಬಿಟ್ಟ ರೀಲು
ಚಿದಂಬ “ರಂ” ಚಮತ್ಕಾರ
ರಾಜ್ ಠಾಕ್ರೆ ಬಿಹಾರಿ ಬಹಿಷ್ಕಾರ
ಗುಜರಾತ್ ಮಾದರಿ ಅಭಿವೃದ್ಧಿ
ಠಾಕ್ರೆ ಮಾದರಿ ಹೊರಾಟಕ್ಕೆ
ಸ್ಥಳೀಯ ತಳಿಗಳ ತಡಕಾಟ
ಅಲ್ಪವಿರಾಮ ಕಂಡಿದೆ
ಕಮರ್ಷಿಯಲ್ ಬ್ರೇಕ್ ನಂತರ
ಹೊಗೇನಕಲ್ ಜಲಪಾತಕ್ಕೆ
ಈಗ ಜಾತಕ ಕೂಡಿ ಬಂದಿದೆ
ಕೋರ್ಟು, ಕಛೇರಿ ಇದ್ದೇ ಇದೆ
ಎದ್ದು ಬಿದ್ದು, ಬಿದ್ದು ಎದ್ದು
ಸಿಕ್ಕ ಸುವರ್ಣಾವಕಾಶ
ಸುಮ್ಮನಿರಲಾದೀತೆ
ಹೋಟಲ್ ಬಂದ್, ಸಿನಿಮಾ ಬಂದ್
ತಮಿಲು ಚಾನೆಲ್ಲುಗಳು ಗಪ್ ಚುಪ್
ಬಸ್ಸು ಲಾರಿಗಳಿಗೆ ಸಾಕಷ್ಟು ಕಿಕ್
ಅತ್ತ ಮಚ್ಚು, ಇತ್ತ ಲಾಂಗ್
ಇನ್ನೇಕೆ ತಡ ಕೊಚ್ಚು ಮಗ
ಅಸಹಾಯಕ ಬಡವರ
ನೂರು ರೂಪಾಯಿಗೆ
ಸಿಕ್ಕೇ ಸಿಗ್ತಾರ
ಇದ್ದವರು ಜುಮ್... ಅಂಥ ಇರ್ತಾರ
ಬರ್ತಾರ, ಹೇಳ್ತಾರ, ಎದ್ದು ಹೋಗ್ತಾರ
ಇರದವರು ಅನಾಯಸವಾಗಿ,
ಇವರ ಬಲೆಗೆ ಸಿಗ್ತಾರ
ಗುಂಡೀಗೆ ಬೀಳ್ತಾರ
ಬದುಕಿದ್ರೆ ನಗ್ತಾರ
ಇಲ್ದಿದ್ರೆ ಅಟೇ
ಮರಿತ್ಬಿಡ್ತಾರ
ಅಯ್ಯೋ ಶಿವನೇ ಫ್ರೀ ಪಬ್ಲಿಸಿಟೀಗೆ ಇಟೆಲ್ಲಾ ಮಾಡ್ತಾರ
ಇದ್ದ ಬದ್ದ ಚಾನಲ್ಗಳೆಲ್ಲಾ ಇದೇ ತೋರಿಸ್ತಾರ
ಮುಂಜಾನೆ ಪೇಪರ್ನೋರು ಇದೇ ಬರೀತಾರ
ಸಾಲದ್ದಕ್ಕೆ ಬುದ್ಧಿಜೀವಿಗಳು ಸುಮ್ಮನಿರುವರೇ
ಇದನ್ನೇ ವಿಮರ್ಶೆ, ವಿಶ್ಲೇಷಣೆ ಮಾಡಿ
ಉಪ್ಪು, ಖಾರ ಹಾಕಿ ಅವರ
ಹೊಟ್ಟೆ ತುಂಬಿಸ್ಕೊತಾರ
ಮಧ್ಯಮ, ಮೇಲ್ಮಧ್ಯಮ ವರ್ಗದವರು ಇದನ್ನೇ
ಮನರಂಜನೆಗಾಗಿ ನೋಡಿ, ನೋಡಿ
ಅವರ ಕಷ್ಟಗಳ ಸ್ವಲ್ಪ ಮಟ್ಟಿಗೆ
ಸಮಾಧಾನ ಮಾಡ್ಕೊಂಡು
ಅದೇ ಮಾತಾಡ್ತಾ ಮತಾಡ್ತಾ
ದಿನ ದೂಡ್ತಾರ
ಹೆಸರು, ಟಿಕಟ್ಟು, ಮತಗಳು, ಅಧಿಕಾರ ಅವರಿಗೆ,
ಮಾಧ್ಯಮದವರಿಗೆ ಭರ್ಜರಿ ವ್ಯಾಪಾರ
ಜನ ಸಾಮಾನ್ಯರಿಗೆ ಮನರಂಜನೆ
ಮಿಕ್ಕವರಿಗೆ ಅದೃಷ್ಟ ಚೆನ್ನಾಗಿದ್ರೆ
ಎರಡೇ ಎರಡು ತುತ್ತು
ಅಟೇಯ
ಗೆಳೆಯ
ಹೊರಡ ಬೇಡವೋ ಗೆಳೆಯ
ಹೊರೆಟೆಯಾದರೂ ಎಲ್ಲಿಗೆ
ಕಳೆದ ನೆನ್ನೆಯ ನೆನಪುಗಳು
ಬೆನ್ನತ್ತಿ ಬರುವವು ನಿನ್ನಲ್ಲಿಗೆ
ಸ್ನೇಹದಿಂದ ಕೊಡ ತುಂಬಿತ್ತು
ಇಟ್ಟವರಾರದಕೆ ಸಣ್ಣ ತೂತು
ಸೋರುತಿದೆ, ಸಹಜ ಕೊಡಕೆ
ಖಾಲಿಯಾದೀತೆಂಬ ಭಯಕೆ
ಮನಸಿಗೇನೋ ಕೊರತೆ ಇದೆ
ಪ್ರಶ್ನೆಗಳೆಷ್ಟೋ ಕೇಳುವುದಿದೆ
ತಕ್ಷಣಕೇ ಉತ್ತರ ಸಿಗದಂತಿದೆ
ಮೌನವಾಗೇ ಪರೀಕ್ಷೆ ಬರೆದಿದೆ
ದುಗುಡವೇಕೊ ಒಳ ಹೊಕ್ಕಿದೆ
ತಿಳಿಯದುದನೇ ಹುಡುಕುತಿದೆ
ಸಹನೆ ಎಲ್ಲೆ ಮೀರಿ ಸಹಕರಿಸದೆ
ಕಾದ ಕಾವಲಿಯಾಗಿ ಕಾಯುತಿದೆ
ಸೋರುತಿಹ ಕೊಡ ತುಂಬಿಸಲೇ
ಸಣ್ಣ ತೂತನು ಮುಚ್ಚಲೆತ್ನಿಸಲೇ
ಸನ್ನಿವೇಶ ನೋಡಿ ಸುಮ್ಮನಿರಲೇ
ಕಾಲಚಕ್ರದಲಿ ಕಳೆದು ಹೋಗಲೇ
ನಿನ್ನ ಅಗಲಿಕೆಗೆ ದುಃಖ ನನಗೇಕೆ
ಅತ್ತಿತ್ತ ಉತ್ತರಕೆ ನಾ ಹುಡುಕಲೇಕೆ
ಭಾವಗಳನೆಲ್ಲ ಬಿಗಿದಿಡಲಿ ಹೇಗೆ
ಎನ್ನ ಭವದ ಕೇಡಿಗೆ ದೂರಲೇಕೆ
ನಿನ್ನ ದಾರಿ ಯಾವುದಾದರೇನು
ನೀನಿದ್ದ ಮನೆಯ ಬಿಟ್ಟರೇನು
ಹೋಗು ಗೆಳೆಯ ನೆಲೆಯ ತಿಳಿಸಿ
ಬರುವೆ ನಾನು ಜೊತೆಯ ಬಯಸಿ
ಹೊರೆಟೆಯಾದರೂ ಎಲ್ಲಿಗೆ
ಕಳೆದ ನೆನ್ನೆಯ ನೆನಪುಗಳು
ಬೆನ್ನತ್ತಿ ಬರುವವು ನಿನ್ನಲ್ಲಿಗೆ
ಸ್ನೇಹದಿಂದ ಕೊಡ ತುಂಬಿತ್ತು
ಇಟ್ಟವರಾರದಕೆ ಸಣ್ಣ ತೂತು
ಸೋರುತಿದೆ, ಸಹಜ ಕೊಡಕೆ
ಖಾಲಿಯಾದೀತೆಂಬ ಭಯಕೆ
ಮನಸಿಗೇನೋ ಕೊರತೆ ಇದೆ
ಪ್ರಶ್ನೆಗಳೆಷ್ಟೋ ಕೇಳುವುದಿದೆ
ತಕ್ಷಣಕೇ ಉತ್ತರ ಸಿಗದಂತಿದೆ
ಮೌನವಾಗೇ ಪರೀಕ್ಷೆ ಬರೆದಿದೆ
ದುಗುಡವೇಕೊ ಒಳ ಹೊಕ್ಕಿದೆ
ತಿಳಿಯದುದನೇ ಹುಡುಕುತಿದೆ
ಸಹನೆ ಎಲ್ಲೆ ಮೀರಿ ಸಹಕರಿಸದೆ
ಕಾದ ಕಾವಲಿಯಾಗಿ ಕಾಯುತಿದೆ
ಸೋರುತಿಹ ಕೊಡ ತುಂಬಿಸಲೇ
ಸಣ್ಣ ತೂತನು ಮುಚ್ಚಲೆತ್ನಿಸಲೇ
ಸನ್ನಿವೇಶ ನೋಡಿ ಸುಮ್ಮನಿರಲೇ
ಕಾಲಚಕ್ರದಲಿ ಕಳೆದು ಹೋಗಲೇ
ನಿನ್ನ ಅಗಲಿಕೆಗೆ ದುಃಖ ನನಗೇಕೆ
ಅತ್ತಿತ್ತ ಉತ್ತರಕೆ ನಾ ಹುಡುಕಲೇಕೆ
ಭಾವಗಳನೆಲ್ಲ ಬಿಗಿದಿಡಲಿ ಹೇಗೆ
ಎನ್ನ ಭವದ ಕೇಡಿಗೆ ದೂರಲೇಕೆ
ನಿನ್ನ ದಾರಿ ಯಾವುದಾದರೇನು
ನೀನಿದ್ದ ಮನೆಯ ಬಿಟ್ಟರೇನು
ಹೋಗು ಗೆಳೆಯ ನೆಲೆಯ ತಿಳಿಸಿ
ಬರುವೆ ನಾನು ಜೊತೆಯ ಬಯಸಿ
Apr 3, 2008
ಹಿಲರಿ ಒಬಾಮ
ಅಮೇರಿಕದಲ್ಲಿ ಹಿಲರಿ, ಬರಾಕ್ ಒಬಾಮ
ಕರಿಯರ ಬಿಳಿಯರ ನಡುವೆ ಸಂಗ್ರಾಮ
ಇಲ್ಲಿ ಯಡ್ಯೂರಿ, ಕೃಷ್ಣ, ಕುಮಾರ ರಾಮ
ಕುಲಗಳ ಕಣದಲಿ ಗೆದ್ದವನಿಗೇ ಸಂಭ್ರಮ
ಜಾತಿ ಲೆಕ್ಕಾಚಾರ ಮಾಡುವರು ಅಪಾರ
ಭ್ರಷ್ಟಾಚಾರದ ಆರೋಪಗಳು ಅವರಿವರ
ರೈತರ ಸಾಲಮನ್ನಾ, ಕಡಿಮೆ ಬಡ್ಡಿದರ
ಅಭಿವೃದ್ಧಿ ಮಂತ್ರ, ಚಂದದ ಮುಂಗಡಪತ್ರ
ಬದಲಾವಣೆಗಾಗಿ ಬರಾಕ್ ಒಬಾಮ
ಮೊದಲ ಮಹಿಳಾ ಅಮೇರಿಕ ಅಧ್ಯಕ್ಷೆ
ಸ್ಥಾನಕೆ ಹಿಲರಿ ಕ್ಲಿಂಟನ್ ದಿಟ್ಟ ಪರಿಶ್ರಮ
ಕಾದುನೋಡುವುದೇ ನಮ್ಮ ಸದ್ಯದ ಕ್ರಮ
ಅಲ್ಲಿ ಒಂದೇ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ
ಅಧ್ಯಕ್ಷಗಿರಿಗೆ ಅವರಿಬ್ಬರ ಮಧ್ಯೆ ಹೋರಾಟ
ಇಲ್ಲಿ ಪಕ್ಷ ಪಕ್ಷಗಳ ನಡುವೆ ಭಾರಿ ಗುದ್ದಾಟ
ಸಿಎಂ ಕುರ್ಚಿಗೆ ಈ ಗಣ್ಯರೆಲ್ಲರ ಕಿರುಚಾಟ
ಇರಲಿ ಅದು ಅಮೇರಿಕ, ಇದು ಕರ್ನಾಟಕ
ಅವರಿಗೆ ವರ್ಣಭೇದ, ನಮಗೆ ಜಾತಿಭೇದ,
ಸ್ಥಳೀಯ, ಜಾಗತಿಕ ಸಮಸ್ಯೆಗೆ ಜೀವಂತಿಕೆ
ಬೇಕಲ್ಲವೇ ವಿಷಯ ಚುನಾವಣೆ ಸಮಯಕೆ
ಕರಿಯರ ಬಿಳಿಯರ ನಡುವೆ ಸಂಗ್ರಾಮ
ಇಲ್ಲಿ ಯಡ್ಯೂರಿ, ಕೃಷ್ಣ, ಕುಮಾರ ರಾಮ
ಕುಲಗಳ ಕಣದಲಿ ಗೆದ್ದವನಿಗೇ ಸಂಭ್ರಮ
ಜಾತಿ ಲೆಕ್ಕಾಚಾರ ಮಾಡುವರು ಅಪಾರ
ಭ್ರಷ್ಟಾಚಾರದ ಆರೋಪಗಳು ಅವರಿವರ
ರೈತರ ಸಾಲಮನ್ನಾ, ಕಡಿಮೆ ಬಡ್ಡಿದರ
ಅಭಿವೃದ್ಧಿ ಮಂತ್ರ, ಚಂದದ ಮುಂಗಡಪತ್ರ
ಬದಲಾವಣೆಗಾಗಿ ಬರಾಕ್ ಒಬಾಮ
ಮೊದಲ ಮಹಿಳಾ ಅಮೇರಿಕ ಅಧ್ಯಕ್ಷೆ
ಸ್ಥಾನಕೆ ಹಿಲರಿ ಕ್ಲಿಂಟನ್ ದಿಟ್ಟ ಪರಿಶ್ರಮ
ಕಾದುನೋಡುವುದೇ ನಮ್ಮ ಸದ್ಯದ ಕ್ರಮ
ಅಲ್ಲಿ ಒಂದೇ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ
ಅಧ್ಯಕ್ಷಗಿರಿಗೆ ಅವರಿಬ್ಬರ ಮಧ್ಯೆ ಹೋರಾಟ
ಇಲ್ಲಿ ಪಕ್ಷ ಪಕ್ಷಗಳ ನಡುವೆ ಭಾರಿ ಗುದ್ದಾಟ
ಸಿಎಂ ಕುರ್ಚಿಗೆ ಈ ಗಣ್ಯರೆಲ್ಲರ ಕಿರುಚಾಟ
ಇರಲಿ ಅದು ಅಮೇರಿಕ, ಇದು ಕರ್ನಾಟಕ
ಅವರಿಗೆ ವರ್ಣಭೇದ, ನಮಗೆ ಜಾತಿಭೇದ,
ಸ್ಥಳೀಯ, ಜಾಗತಿಕ ಸಮಸ್ಯೆಗೆ ಜೀವಂತಿಕೆ
ಬೇಕಲ್ಲವೇ ವಿಷಯ ಚುನಾವಣೆ ಸಮಯಕೆ
Apr 1, 2008
ಕೆಂಡಸಂಪಿಗೆ
ವ್ಹಾ.ವ್ಹಾ.. ಕೆಂಡಸಂಪಿಗೆ!
ಮೊದಲ ನೋಟಕೇ ಬಿದ್ದೆ
ನಾ ನಿನ್ನ ಬುಟ್ಟಿಗೆ
ಮತ್ತೆ ನಿನ್ನ ಪರಿಮಳದ ಮಾತೇಕೆ
ನಾನೊಬ್ಬನೇ ಸವಿಯುವೆ
ಮೆಲ್ಲಗೆ
ಇನ್ನು ನಾಚಿಕೆ ಏಕೆ?
ನಾ ಬರುವೆ ದಿನವು
ನಿನ್ನ ಬಳಿಗೆ
ಅತ್ತಿತ್ತ ನೋಡದಿರು ಸುಮ್ಮನೆ
ಈಗ ಇಲ್ಲಿರುವವನು
ನಾನೊಬ್ಬನೆ
ಸದ್ದು ಮಾಡದೆ ಸಂಪಿಗೆ
ಸರಸವಾಡೋಣ
ಒಟ್ಟಿಗೆ
ಮೊದಲ ನೋಟಕೇ ಬಿದ್ದೆ
ನಾ ನಿನ್ನ ಬುಟ್ಟಿಗೆ
ಮತ್ತೆ ನಿನ್ನ ಪರಿಮಳದ ಮಾತೇಕೆ
ನಾನೊಬ್ಬನೇ ಸವಿಯುವೆ
ಮೆಲ್ಲಗೆ
ಇನ್ನು ನಾಚಿಕೆ ಏಕೆ?
ನಾ ಬರುವೆ ದಿನವು
ನಿನ್ನ ಬಳಿಗೆ
ಅತ್ತಿತ್ತ ನೋಡದಿರು ಸುಮ್ಮನೆ
ಈಗ ಇಲ್ಲಿರುವವನು
ನಾನೊಬ್ಬನೆ
ಸದ್ದು ಮಾಡದೆ ಸಂಪಿಗೆ
ಸರಸವಾಡೋಣ
ಒಟ್ಟಿಗೆ
ನೆಲಕೆ ನೆಲೆ
ನೆಲಕೆ ನೆಲೆಯಿಲ್ಲದೆ ನರಳುತಿದೆ
ಅತಿಯಾಗಿ ರಸಗೊಬ್ಬರ ಸುರಿದು
ಸಾರವನ್ನೆಲ್ಲಾ ಹೀರಿ ಬೆಂಡಾಗಿ
ಬಾಡಿ ಬರಡಾಗಿ ಬಾಯಿ ಬಿಟ್ಟಿದೆ
ಅವ್ವನ ಹಸಿವ ಬಲ್ಲವರು ಎಲ್ಲಿ
ಕೊರಳಿನ ಕೂಗು ಕೇಳಿದವರೆಲ್ಲಿ
ನೋವಿನ ತಿರುಳು ತಿಳಿದವರೆಲ್ಲಿ
ಮೌನವಾಗಿ ಮರುಗುತಿಹಳು
ಬೋರು ಕೊರೆದು ರಕ್ತ ಎಳೆದು
ಕೃತಕ ಹಸಿರು ಹರಡಿ ಹರುಷಕೆ
ಮತ್ತೆ ಹರಡಿ ಮತ್ತೆ ಅಳಿಸಿ ಅದೇ
ಅಮಾನುಷ ಅಮಾನವೀಯತೆ
ಅಸ್ತಿತ್ವದ ಆಳಕೆ ಹಾನಿಯಾಗಿ
ದಾಹ ನೀಗಲು ಸಿಗದು ನೀರು
ಧಣಿದ ದೇಹಕಿಲ್ಲ ಹನಿ ಬೆವರು
ಭಾರವಾಗಿ ಎಳೆದೆಳೆದು ಉಸಿರು
ಅತಿಯಾಗಿ ರಸಗೊಬ್ಬರ ಸುರಿದು
ಸಾರವನ್ನೆಲ್ಲಾ ಹೀರಿ ಬೆಂಡಾಗಿ
ಬಾಡಿ ಬರಡಾಗಿ ಬಾಯಿ ಬಿಟ್ಟಿದೆ
ಅವ್ವನ ಹಸಿವ ಬಲ್ಲವರು ಎಲ್ಲಿ
ಕೊರಳಿನ ಕೂಗು ಕೇಳಿದವರೆಲ್ಲಿ
ನೋವಿನ ತಿರುಳು ತಿಳಿದವರೆಲ್ಲಿ
ಮೌನವಾಗಿ ಮರುಗುತಿಹಳು
ಬೋರು ಕೊರೆದು ರಕ್ತ ಎಳೆದು
ಕೃತಕ ಹಸಿರು ಹರಡಿ ಹರುಷಕೆ
ಮತ್ತೆ ಹರಡಿ ಮತ್ತೆ ಅಳಿಸಿ ಅದೇ
ಅಮಾನುಷ ಅಮಾನವೀಯತೆ
ಅಸ್ತಿತ್ವದ ಆಳಕೆ ಹಾನಿಯಾಗಿ
ದಾಹ ನೀಗಲು ಸಿಗದು ನೀರು
ಧಣಿದ ದೇಹಕಿಲ್ಲ ಹನಿ ಬೆವರು
ಭಾರವಾಗಿ ಎಳೆದೆಳೆದು ಉಸಿರು
Subscribe to:
Comments (Atom)