May 27, 2009

ಜ್ಞಾನ

ನನ್ನ ರೆಕ್ಕೆಗಳ ಮುರಿಯುವುದನ್ನು ನಿಲ್ಲಿಸಿದಾಗ
ದೋಷಪೂರಿತ ವಸ್ತುಗಳ ಎದುರಲ್ಲಿ,
ಹಾಗೇ ತಿಳಿದುಕೊಂಡೆ, ಒಪ್ಪಂದಗಳು ಕಾದಿರುವುದನ್ನು
ಯಾವಾಗಲೋ ತೆರೆದುಕೊಳ್ಳುವ ಪ್ರತಿ ಬಾಗಿಲ ಹಿಂದೆ,
ನಾನು ನೋಡಿದಾಗ ಬದುಕನ್ನು ಕಣ್ಣುಗಳಿಂದ,
ಪ್ರಶಾಂತವಾಗಿ ಬೆಳೆದು, ಬಹಳ ಬುದ್ಧಿವಂತಿಕೆಯೊಂದಿಗೆ,
ಬದುಕು ನನಗೆ ಸತ್ಯವನ್ನು ನೀಡಿರಬಹುದಾದರೂ,
ಅದು ಬದಲಾಗಿ ಪಡೆದುಕೊಂಡಿದೆ -- ನನ್ನ ಯೌವನವನ್ನು.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ