May 10, 2011

ಕಾಲ

ಕಾಲ
ಕಟ್ಟಿ, ಕೂಡಿಡಲು
ಕಪ್ಪು ಹಣವಲ್ಲ

ದೇಶ
ದೋಚಿಕೊಳ್ಳಲು
ಯಾರಪ್ಪನ ಸ್ವತ್ತಲ್ಲ

ಕಿಂಚಿತ್
ಇತಿಹಾಸ ಬಲ್ಲ
ಬಲ್ಲಿದನೂ ಊಹಿಸಬಲ್ಲ
ನಾಳೆಗಳ ನಾದ-ವಿನೋದ

ಸಾಗಲಿ, ಸಾಗಲಿ
ಸಡಗರದ ಗರಡಿ
ಸಾಗರವ ದಾಟಿ, ಶಿಖರಗಳ ಮೆಟ್ಟಿ
ಕೊರೆದು, ಜಿಗಿದು, ತೇಲಿ, ಹಾರಿ
ಎಗ್ಗಿಲ್ಲದೆ ಮಬ್ಬುಗತ್ತಲಿನಲ್ಲೂ
ಅಲ್ಲಲ್ಲಿ ಇರುವೆಗಳ ಹಿಂಡು, ಹೆಗ್ಗಣಗಳ ದಂಡು

ಖಂಡಿತ
ಮತ್ತೆ ಬರುವುದು ವಸಂತ
ಮೂಡಣದ ರವಿಯೂ
ಮುಗುಚಿ, ಮುಗ್ಗರಿಸುವಂತೆ...

5 comments:

ಮನಸು said...

ತುಂಬಾ ಚೆನ್ನಾಗಿದೆ ಕವನ... ಮತ್ತೆ ಬರುವುದು ವಸಂತ ಆದರೆ ಕಾಯುವ ತಾಳ್ಮೆ ಇರಬೇಕು ಅಷ್ಟೆ

ಸಾಗರದಾಚೆಯ ಇಂಚರ said...

Chandina,
sundara kavana
taalmeyalli baalveye ide

ಚಂದಿನ | Chandrashekar said...

ಮನಸು ಮೇಡಮ್ ಹಾಗು ಡಾ.ಗುರುಪ್ರಸಾದ್ ಅವರೆ,

ನಿಮ್ಮ ಸತತ ಪ್ರೋತ್ಸಾಹಕ್ಕೆ ಧನ್ಯವಾದಗಳು...

ಚಂದಿನ | Chandrashekar said...

ಧನ್ಯವಾದಗಳು...

ಮನಸು ಮೇಡಮ್, ಡಾ.ಗುರುಪ್ರಸಾದ್ ಹಾಗು ರಘು ಅವರೆ,

ನಿಮ್ಮ ಮೆಚ್ಚುಗೆಗೆ.

KannadaHanigalu said...

Nice,

ತುಂಬಾ ಚೆನ್ನಾಗಿದೆ, ವಸಂತ ಬರುವ ವೇಳೆ ಇದು.

ದಯವಿಟ್ಟು ನನ್ನ ಬ್ಲಾಗ್ http://kannadahanigalu.com/ ನ ಒಮ್ಮೆ ಭೇಟಿಕೊಡಿ. ನಿಮ್ಮ ಕವನಗಳನ್ನು ಸಾದ್ಯವಾದಲ್ಲಿ ನಮ್ಮ ತಾಣದಲ್ಲಿ ಸೇರಿಸಿ (ನಿಮ್ಮದೆ ಹೆಸರಿನಲ್ಲಿ), ಇನ್ನೂ ಹೆಚ್ಚಿನ ಜನರನ್ನು ನಿಮ್ಮ ಕವನಗಳ ಮೂಲಕ ತಲುಪಿ.

Regards
ಕನ್ನಡಹನಿಗಳ ಬಳಗ