ಹಾದಿ ಇರದವನಿಗೆ
ನಡೆದದ್ದೇ ಹಾದಿ
ನಿರೀಕ್ಷೆ ಇರದವನಿಗೆ ಇದ್ದೇ ಇದೆ
ಹಾದಿಯ ಎರಡೂ ಬದಿ
ನಡೆದ ಹಾದಿಯಲಿ ಉಳಿದಿಲ್ಲ
ಯಾವ ಹೆಜ್ಜೆ ಗುರುತು
ಅಲ್ಲಿ ಹುಲಿ, ಸಿಂಹ, ನರಿ ,
ತೋಳಗಳ ಸಾಥ್.
ಹುಡುಕಾಟವೇನೋ ,
ಏಕೋ, ಹೇಗೋ,ಎಲ್ಲೋ ?
ಇರದುದೇನೆಂಬುದರ ಕಲ್ಪನೆ ,
ಗಾಳಿ ಗಂಧವಿಲ್ಲ
ಇರುವುದೆಲ್ಲವ ತೊರೆದು ನಿಂತರೆ
ಕ್ಯಾರೆ ಎಂಬುವವರಿಲ್ಲ
ಲಗೇಜು ಲೈಟಾಗಿರಲು
ಪಯಣ ಸುಗಮವೆಂಬುದು ನಿಜ
ಹಾದೀಲಿ ಸಿಕ್ಕವರ
ಬೇಕು ಬೇಡಗಳು ಭಾರ, ಸಹಜ.
ಬಯಕೆ ಹೆಚ್ಚಾದಾಗ
ಮೂಡಿದ ಮಾತುಗಳೀಗ
ನಿಜಕ್ಕೂ ಮುಕ್ತಿ ಮಾರ್ಗ.
Jun 27, 2008
ಉರಿವ ಉಲ್ಕೆಯ ಹಾಗೆ
ಕೈ ಹಿಡಿದ ಕಾಯಕ
ಆಯ್ಕೆಯಲ್ಲ
ಅನಿವಾರ್ಯತೆ ಹಾಗೂ
ಬೀಸಿದ ಬಲೆ
ದಟ್ಟಡವಿಯಲಿ ಕಳೆದು
ಹೋಗುವುದು ಸುಲಭ
ಎಲ್ಲಿರುವ ಸುಳಿವಿರದ
ಸನ್ನಿವೇಶ.
ಬೇಡುವುದರ ಬೆನ್ನತ್ತಿ
ಬೆತ್ತಲೆ ಬೆವರು
ಕತ್ತಲಲಿ ತಡಕಾಡಿ
ಕಣ್ಣಲ್ಲಿ ಧೂಳು
ಅವಕಾಶಗಳ ಕೊರತೆ
ದೂರುವುದು ಸರಿಯೆ
ಅದೃಷ್ಟ ಪರೀಕ್ಷೆ
ಕೈಕೊಟ್ಟರೂ ಸರಿಯೆ
ಉರಿವ ಉಲ್ಕೆಗಳಂತೆ
ಉರಿಯುವ ಹಂಬಲ.
ಆಯ್ಕೆಯಲ್ಲ
ಅನಿವಾರ್ಯತೆ ಹಾಗೂ
ಬೀಸಿದ ಬಲೆ
ದಟ್ಟಡವಿಯಲಿ ಕಳೆದು
ಹೋಗುವುದು ಸುಲಭ
ಎಲ್ಲಿರುವ ಸುಳಿವಿರದ
ಸನ್ನಿವೇಶ.
ಬೇಡುವುದರ ಬೆನ್ನತ್ತಿ
ಬೆತ್ತಲೆ ಬೆವರು
ಕತ್ತಲಲಿ ತಡಕಾಡಿ
ಕಣ್ಣಲ್ಲಿ ಧೂಳು
ಅವಕಾಶಗಳ ಕೊರತೆ
ದೂರುವುದು ಸರಿಯೆ
ಅದೃಷ್ಟ ಪರೀಕ್ಷೆ
ಕೈಕೊಟ್ಟರೂ ಸರಿಯೆ
ಉರಿವ ಉಲ್ಕೆಗಳಂತೆ
ಉರಿಯುವ ಹಂಬಲ.
Jun 25, 2008
ಮುಸ್ಸಂಜೆಯ ಮುಖಾಮುಖಿ
ನೆಪಕೊಂದು ಪುಸ್ತಕ ಕೈಯೊಳಗೆ
ಹಾಳೆಗಳ ತಿರುವಿ
ಭಾವಗಳ ಮುಚ್ಚಿಡುವ ಯತ್ನ.
ಕಿಟಕಿಯಿಂದಾಚೆಗಿರುವ
ಬೆತ್ತಲೆ ಮರದಲ್ಲಿ
ಎಲೆಗಳ ಹುಡುಕುವ
ತವಕ.
ಬೇಸಿಗೆಯ ಮಧ್ಯಾಹ್ನ
ಆಗಸಕೆ ನೀರವ ಮೌನ
ಅಲ್ಲಿ ಬೆಳ್ಳಕ್ಕಿಗಳ ಸಾಲುಗಳ
ಕಾಣುವ ಹಂಬಲ.
ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ
ಗುಡ್ಡೆಹಾಕಿ, ರಭಸದಿಂದ
ಮುಕ್ಕಿ,ಏನೋ ಸಾಧಿಸಿದ ನಿಟ್ಟುಸಿರು.
ಮಲಗಿದ್ದ ದಿನಪತ್ರಿಕೆಯೆತ್ತಿ
ಅತ್ತಿತ್ತ ನೋಡಿ, ಪರ ಪರ ಹರಿದು
ಹಿಡಿ ಹಿಡಿ ಉಂಡೆಗಳನ್ನೆಸೆದಾಗ
ಕಸದ ಬುಟ್ಟಿಗೆ ಸಮಾಧಾನ.
ಬಿಗಿಯಾಗಿ ಕಟ್ಟಿಟ್ಟ ಭಾರದ
ಮುನಿಸಿನ ಗಂಟು ಸಡಿಲಾದಂತೆ
ಬಿಗುವಾದ ಮೊಗವು ಸಹ
ಬಿಂಕ ಬಿಡಲೊಪ್ಪದು.
ಮುಸ್ಸಂಜೆಯಾದಂತೆ ಮತ್ತೆ
ಮುಖಾಮುಖಿಯ ಸಮಯ.
ಹಗುರಾದ ಮನಸ್ಸಿಗೆ
ಯಾಕೋ ಕೃತಕ ಕೋಪ.
ಹಾಳೆಗಳ ತಿರುವಿ
ಭಾವಗಳ ಮುಚ್ಚಿಡುವ ಯತ್ನ.
ಕಿಟಕಿಯಿಂದಾಚೆಗಿರುವ
ಬೆತ್ತಲೆ ಮರದಲ್ಲಿ
ಎಲೆಗಳ ಹುಡುಕುವ
ತವಕ.
ಬೇಸಿಗೆಯ ಮಧ್ಯಾಹ್ನ
ಆಗಸಕೆ ನೀರವ ಮೌನ
ಅಲ್ಲಿ ಬೆಳ್ಳಕ್ಕಿಗಳ ಸಾಲುಗಳ
ಕಾಣುವ ಹಂಬಲ.
ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ
ಗುಡ್ಡೆಹಾಕಿ, ರಭಸದಿಂದ
ಮುಕ್ಕಿ,ಏನೋ ಸಾಧಿಸಿದ ನಿಟ್ಟುಸಿರು.
ಮಲಗಿದ್ದ ದಿನಪತ್ರಿಕೆಯೆತ್ತಿ
ಅತ್ತಿತ್ತ ನೋಡಿ, ಪರ ಪರ ಹರಿದು
ಹಿಡಿ ಹಿಡಿ ಉಂಡೆಗಳನ್ನೆಸೆದಾಗ
ಕಸದ ಬುಟ್ಟಿಗೆ ಸಮಾಧಾನ.
ಬಿಗಿಯಾಗಿ ಕಟ್ಟಿಟ್ಟ ಭಾರದ
ಮುನಿಸಿನ ಗಂಟು ಸಡಿಲಾದಂತೆ
ಬಿಗುವಾದ ಮೊಗವು ಸಹ
ಬಿಂಕ ಬಿಡಲೊಪ್ಪದು.
ಮುಸ್ಸಂಜೆಯಾದಂತೆ ಮತ್ತೆ
ಮುಖಾಮುಖಿಯ ಸಮಯ.
ಹಗುರಾದ ಮನಸ್ಸಿಗೆ
ಯಾಕೋ ಕೃತಕ ಕೋಪ.
Jun 24, 2008
ತಡವಾಗಿ ಬಂದ ಅರಿವು*
ಅರೆ ಬೆಂದ ಅನ್ನ
ಅರೆ ತುಂಬಿದ ಕೊಡದಲ್ಲಿ
ಕುತ ಕುತ ಕುತ ಕುತ
ಕುದಿಯುತ್ತಿದೆ
ಸುರಿದ ನೀರು
ಆವಿಯಾದಷ್ಟೂ
ಬೆಂದಿರುವುದೆಂಬ ತರ್ಕ.
ಭುಸುಗುಡುವ ರಭಸ
ಹೆಚ್ಚಾದಂತೆಲ್ಲ
ಅದೇ ವೇಗಕೆ
ಸಂಯಮ ಬತ್ತಿ ಹೋಗುತ್ತಿದೆ
ಅರೆ ಬೆಂದ ಅನ್ನ ,
ಇಲ್ಲವೆ ಅಕ್ಕಿ
ಇಲ್ಲಿ ಸುಖವಿಲ್ಲ.
ಉರಿಯ ಬಿಸಿಯೇರಿ
ತನ್ನೊಡಲ ಸುಡುತ್ತಿದ್ದರೆ
ಸಹಿಸಲಾಗದ ಸ್ಥಿತಿ;
ಸುಮ್ಮನಿರಲಾಗದು
ಸುರಿವವರು ಯಾರಿಲ್ಲಿ ನೀರು?
ಧಿಗ್ಗನೆದ್ದು ಧಗ ಧಗನುರಿವ ಬೆಂಕಿ
ಎಲ್ಲವೂ ಕರಗಿ ಕರಕಲಾಗುವ
ಸಮಯ ಹತ್ತಿರವಾದಂತೆ
ಜೀವ ಹಾರಿ ಹೋಗುವ ಕ್ಷಣ
ಪಾಪ ಪ್ರಜ್ಞೆ ಕಾಡುತ್ತಿದೆ
ಪ್ರಾಣ ಭಯಕೊ ,
ಇಲ್ಲ ಮನುಷ್ಯತ್ವದ ನೆನಪಿಗೋ
ಇದೀಗ ಬಹಳ ತಡವಾಗಿದೆ.
ಅರೆ ತುಂಬಿದ ಕೊಡದಲ್ಲಿ
ಕುತ ಕುತ ಕುತ ಕುತ
ಕುದಿಯುತ್ತಿದೆ
ಸುರಿದ ನೀರು
ಆವಿಯಾದಷ್ಟೂ
ಬೆಂದಿರುವುದೆಂಬ ತರ್ಕ.
ಭುಸುಗುಡುವ ರಭಸ
ಹೆಚ್ಚಾದಂತೆಲ್ಲ
ಅದೇ ವೇಗಕೆ
ಸಂಯಮ ಬತ್ತಿ ಹೋಗುತ್ತಿದೆ
ಅರೆ ಬೆಂದ ಅನ್ನ ,
ಇಲ್ಲವೆ ಅಕ್ಕಿ
ಇಲ್ಲಿ ಸುಖವಿಲ್ಲ.
ಉರಿಯ ಬಿಸಿಯೇರಿ
ತನ್ನೊಡಲ ಸುಡುತ್ತಿದ್ದರೆ
ಸಹಿಸಲಾಗದ ಸ್ಥಿತಿ;
ಸುಮ್ಮನಿರಲಾಗದು
ಸುರಿವವರು ಯಾರಿಲ್ಲಿ ನೀರು?
ಧಿಗ್ಗನೆದ್ದು ಧಗ ಧಗನುರಿವ ಬೆಂಕಿ
ಎಲ್ಲವೂ ಕರಗಿ ಕರಕಲಾಗುವ
ಸಮಯ ಹತ್ತಿರವಾದಂತೆ
ಜೀವ ಹಾರಿ ಹೋಗುವ ಕ್ಷಣ
ಪಾಪ ಪ್ರಜ್ಞೆ ಕಾಡುತ್ತಿದೆ
ಪ್ರಾಣ ಭಯಕೊ ,
ಇಲ್ಲ ಮನುಷ್ಯತ್ವದ ನೆನಪಿಗೋ
ಇದೀಗ ಬಹಳ ತಡವಾಗಿದೆ.
ನವೀನ ನರಕ*
ತೇಪೆ ಹಾಕಿದ ರಸ್ತೆಗೆ
ಅಲ್ಲಲ್ಲಿ ಕೆಂಪು, ಹಳದಿ ,
ಹಸಿರು ಲೈಟೊತ್ತ ಕಮಾನು
ವಿಚಿತ್ರ ಕೇಕೆಯೊಂದಿಗೆ
ಧೂಳೆಬ್ಬಿಸಿ ,
ಹೊಗೆ ಉಗುಳಿ ,
ಲಬೋ ಲಬೋ ಎಂದು
ಬಾಯಿ ಬಡಿದುಕೊಂಡು
ಇರುವೆಗಳಂತೆ ಸಾಲುಗಟ್ಟಿ
ಉಸಿರುಗಟ್ಟುವ ವಾಹನಗಳ ದಂಡು.
ಲಲನೆಯೊಬ್ಬಳು ನಿಂತು
ನಾಟಕದ ಪಾತ್ರಧಾರಿಯಂತೆ ಸಿಂಗರಿಸಿ
ಗ್ರಾಹಕರ ಸೆಳೆಯಳು ಯತ್ನಿಸುವಳು.
ಕುಡಿಯಲು ಕೆಟ್ಟ ನೀರು ,
ಚರಂಡಿ ವಾಸನೆ ,
ಕಸದ ಡಬ್ಬಿಗಳು ,
ಬೆನ್ನು ಮುರಿಯುವ ಆಟೊಗಳು
ಹುಬ್ಬೇರಿಸಿದರೂ ಇಳಿಯದ ಪೆಟ್ರೋಲ್ ಬೆಲೆ
ಆಯಾಸಗೊಂಡು ಮನೆ ಸೇರಿದರೆ
ತಡವಾಗಿ ಬಂದಿದಕ್ಕೆ ಮಂಗಳಾರತಿ
ವಿನಮ್ರವಾಗಿ ಸ್ವೀಕರಿಸಿ ,
ಕೈಗಿತ್ತ ಪಟ್ಟಿಯ ಗಂಭೀರ ಪರೀಕ್ಷೆಯ ನಂತರ
ಯುದ್ಧಕ್ಕೆ ತೆರಳಿದ ವೀರ ಸೈನಿಕನಂತೆ
ಚೌಕಾಸಿ ಮಾಡಿದರು ತೃಪ್ತಿಯಿಲ್ಲ;
ಪ್ರತಿಭೆ ಎಲ್ಲವೂ ವ್ಯರ್ಥ.
ತುಟ್ಟಿ ತರಕಾರಿ, ಹಣ್ಣು, ದಿನಸಿ ಸಾಮಾನು ಜೊತೆಗೆ
ಪೆಚ್ಚುಮೋರೆ ಹೊತ್ತು ತಿರುಗಿ ಮನೆಯತ್ತ.
ಮರುದಿನದ ಮುಖಾಮುಖಿಗೆ
ಮಾನಸಿಕ ತಯಾರಿ
ರಕ್ತ ಹೀರುವ ಶಾಲೆಗಳು
ಸದಾ ಕಿರುಚುವ ಬಾಸ್ ಗಳು
ಕರೆಂಟು, ಪೇಪರ್, ಹಾಲು ,
ಗ್ಯಾಸ್, ಕೇಬಲ್, ಮೊಬೈಲು ,
ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ,
ಎಲ್ ಐ ಸಿ ಪ್ರೀಮಿಯಮ್ ,
ಕ್ರೆಡಿಟ್ ಕಾರ್ಡ್ ಬಿಲ್ಲುಗಳ
ಪಟ್ಟಿ ಬೆಳೆಯುತ್ತಲೇ ಇದೆ
ಹನುಮಂತನ ಬಾಲದಂತೆ
ಕಾರ್ ಲೋನ್, ಪರ್ಸನಲ್ ಲೋನ್ ,
ಹೌಸಿಂಗ್ ಲೋನ್ ಇನ್ಸ್ಟಾಲ್ಮೆಂಟ್...
ಪುಂಡುಪೋಕರ ಪ್ರತಿಭೆ
ಪ್ರೋತ್ಸಾಹಿಸಲು ನಾಯಕರ ದಂಡು
ಒಳಗೆ ಹೋದಷ್ಟೇ ವೇಗವಾಗಿ
ಹೊರಬರುವ ಕಸರತ್ತು
ಇವರೆಲ್ಲರ ಸಾಧನೆಯ ಬಿತ್ತರಿಸಲು ,
ಪ್ರಚಾರಕ್ಕಾಗಿ ಕಾತುರದಿಂದ
ಕಾದಿರುವ ಮಾಧ್ಯಮದ ಮಿತ್ರರು
ಕೊಲೆ, ರೇಪ್, ದರೋಡೆ, ಸುಲಿಗೆ ,
ಮೋಸ, ವಂಚನೆಗಳ ಸುದ್ದಿ ಬಿತ್ತರಿಸಲು
ಪೈಪೋಟಿ, ಯಾರು
ಎಷ್ಟು ವೇಗವಾಗಿ ಬಿತ್ತರಿಸುವರೊ
ಅವರೇ ಇಲ್ಲಿ ಪ್ರಚಂಡರು.
ಬಿಡದೇ ಕೊರೆಯುವ ಡೈಲಿ ಸೀರಿಯಲ್ಲುಗಳು
ಪ್ರತಿಭಾ ಪ್ರದರ್ಶನಗಳಿಂದ
ಗೋಳಿಡುವ ಕಾರ್ಯಕ್ರಮಗಳು
ಅದೇ ಸುದ್ದಿಯನ್ನು ಸಿಂಗರಿಸಿ
ದಿನಪೂರ ಎಳೆದಾಡುವ
ಸುದ್ದಿ ಚಾನೆಲ್ಲುಗಳು.
ಇವೆಲ್ಲ ಸಹಿಸಿಕೊಂಡು ದಿನದೂಡಿ
ಬದುಕುಳಿದವರು ಅದೃಷ್ಟವಂತರು.
ಹೆಸರೇ ಗೊತ್ತಿರದ ಖಾಯಿಲೆಗಳಿಂದ
ನರಳಿ ನೋವುಂಡವರಿಗೆ
ಹಾಸ್ಪಿಟಲ್ಗೆ ಕಾಲಿಡಲು ಭಯ.
ಅಲ್ಲಿಂದ ಎದ್ದು ,
ಗೆದ್ದು ಬಂದರೆ
ಧೀರ್ಘ ನಿಟ್ಟುಸಿರು.
ಅಲ್ಲಲ್ಲಿ ಕೆಂಪು, ಹಳದಿ ,
ಹಸಿರು ಲೈಟೊತ್ತ ಕಮಾನು
ವಿಚಿತ್ರ ಕೇಕೆಯೊಂದಿಗೆ
ಧೂಳೆಬ್ಬಿಸಿ ,
ಹೊಗೆ ಉಗುಳಿ ,
ಲಬೋ ಲಬೋ ಎಂದು
ಬಾಯಿ ಬಡಿದುಕೊಂಡು
ಇರುವೆಗಳಂತೆ ಸಾಲುಗಟ್ಟಿ
ಉಸಿರುಗಟ್ಟುವ ವಾಹನಗಳ ದಂಡು.
ಲಲನೆಯೊಬ್ಬಳು ನಿಂತು
ನಾಟಕದ ಪಾತ್ರಧಾರಿಯಂತೆ ಸಿಂಗರಿಸಿ
ಗ್ರಾಹಕರ ಸೆಳೆಯಳು ಯತ್ನಿಸುವಳು.
ಕುಡಿಯಲು ಕೆಟ್ಟ ನೀರು ,
ಚರಂಡಿ ವಾಸನೆ ,
ಕಸದ ಡಬ್ಬಿಗಳು ,
ಬೆನ್ನು ಮುರಿಯುವ ಆಟೊಗಳು
ಹುಬ್ಬೇರಿಸಿದರೂ ಇಳಿಯದ ಪೆಟ್ರೋಲ್ ಬೆಲೆ
ಆಯಾಸಗೊಂಡು ಮನೆ ಸೇರಿದರೆ
ತಡವಾಗಿ ಬಂದಿದಕ್ಕೆ ಮಂಗಳಾರತಿ
ವಿನಮ್ರವಾಗಿ ಸ್ವೀಕರಿಸಿ ,
ಕೈಗಿತ್ತ ಪಟ್ಟಿಯ ಗಂಭೀರ ಪರೀಕ್ಷೆಯ ನಂತರ
ಯುದ್ಧಕ್ಕೆ ತೆರಳಿದ ವೀರ ಸೈನಿಕನಂತೆ
ಚೌಕಾಸಿ ಮಾಡಿದರು ತೃಪ್ತಿಯಿಲ್ಲ;
ಪ್ರತಿಭೆ ಎಲ್ಲವೂ ವ್ಯರ್ಥ.
ತುಟ್ಟಿ ತರಕಾರಿ, ಹಣ್ಣು, ದಿನಸಿ ಸಾಮಾನು ಜೊತೆಗೆ
ಪೆಚ್ಚುಮೋರೆ ಹೊತ್ತು ತಿರುಗಿ ಮನೆಯತ್ತ.
ಮರುದಿನದ ಮುಖಾಮುಖಿಗೆ
ಮಾನಸಿಕ ತಯಾರಿ
ರಕ್ತ ಹೀರುವ ಶಾಲೆಗಳು
ಸದಾ ಕಿರುಚುವ ಬಾಸ್ ಗಳು
ಕರೆಂಟು, ಪೇಪರ್, ಹಾಲು ,
ಗ್ಯಾಸ್, ಕೇಬಲ್, ಮೊಬೈಲು ,
ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ,
ಎಲ್ ಐ ಸಿ ಪ್ರೀಮಿಯಮ್ ,
ಕ್ರೆಡಿಟ್ ಕಾರ್ಡ್ ಬಿಲ್ಲುಗಳ
ಪಟ್ಟಿ ಬೆಳೆಯುತ್ತಲೇ ಇದೆ
ಹನುಮಂತನ ಬಾಲದಂತೆ
ಕಾರ್ ಲೋನ್, ಪರ್ಸನಲ್ ಲೋನ್ ,
ಹೌಸಿಂಗ್ ಲೋನ್ ಇನ್ಸ್ಟಾಲ್ಮೆಂಟ್...
ಪುಂಡುಪೋಕರ ಪ್ರತಿಭೆ
ಪ್ರೋತ್ಸಾಹಿಸಲು ನಾಯಕರ ದಂಡು
ಒಳಗೆ ಹೋದಷ್ಟೇ ವೇಗವಾಗಿ
ಹೊರಬರುವ ಕಸರತ್ತು
ಇವರೆಲ್ಲರ ಸಾಧನೆಯ ಬಿತ್ತರಿಸಲು ,
ಪ್ರಚಾರಕ್ಕಾಗಿ ಕಾತುರದಿಂದ
ಕಾದಿರುವ ಮಾಧ್ಯಮದ ಮಿತ್ರರು
ಕೊಲೆ, ರೇಪ್, ದರೋಡೆ, ಸುಲಿಗೆ ,
ಮೋಸ, ವಂಚನೆಗಳ ಸುದ್ದಿ ಬಿತ್ತರಿಸಲು
ಪೈಪೋಟಿ, ಯಾರು
ಎಷ್ಟು ವೇಗವಾಗಿ ಬಿತ್ತರಿಸುವರೊ
ಅವರೇ ಇಲ್ಲಿ ಪ್ರಚಂಡರು.
ಬಿಡದೇ ಕೊರೆಯುವ ಡೈಲಿ ಸೀರಿಯಲ್ಲುಗಳು
ಪ್ರತಿಭಾ ಪ್ರದರ್ಶನಗಳಿಂದ
ಗೋಳಿಡುವ ಕಾರ್ಯಕ್ರಮಗಳು
ಅದೇ ಸುದ್ದಿಯನ್ನು ಸಿಂಗರಿಸಿ
ದಿನಪೂರ ಎಳೆದಾಡುವ
ಸುದ್ದಿ ಚಾನೆಲ್ಲುಗಳು.
ಇವೆಲ್ಲ ಸಹಿಸಿಕೊಂಡು ದಿನದೂಡಿ
ಬದುಕುಳಿದವರು ಅದೃಷ್ಟವಂತರು.
ಹೆಸರೇ ಗೊತ್ತಿರದ ಖಾಯಿಲೆಗಳಿಂದ
ನರಳಿ ನೋವುಂಡವರಿಗೆ
ಹಾಸ್ಪಿಟಲ್ಗೆ ಕಾಲಿಡಲು ಭಯ.
ಅಲ್ಲಿಂದ ಎದ್ದು ,
ಗೆದ್ದು ಬಂದರೆ
ಧೀರ್ಘ ನಿಟ್ಟುಸಿರು.
Jun 23, 2008
ಮಾತು ಮೌನ*
ಮೊದಮೊದಲು ಮಾತು ಮೌನ
ಕ್ಷಣ ಕ್ಷಣವು ಕುತೂಹಲದ ಕದನ
ಹಂಬಲಿಸುತಿರುವೆ ಯಾವುದಕ್ಕೆ.
ಮನವ ಮೌನವಾಗಿಸಲಾಗದೆ?
ತಳಮಳಗಳ ತಡವರಿಕೆಯ ಬೇಗೆ
ಏನನೋ ಕಾಣುವ ಕಾತುರ ಕಣ್ಣಿಗೆ
ಕದಡಿದ ಹನಿ ಗೆರೆಯಂಚಿಗೆ ನೂಕಿ
ಮೊಗದಲ್ಲಿ ತನ್ನ ಹಾದಿ ಹುಡುಕಿತ್ತು
ಕಂಡ ಪ್ರತಿಬಿಂಬ ಅದೇ ಹೇಳಿರಲು
ದಿಟವನೇಕೊ ಒಪ್ಪದೀ ಮನಸು
ತುಟಿತೆರೆದು ತಡುಕಿದರು ಸಿಗದ
ಮಾತು, ಮೌನವೇ ಹಿತವೆನಿಸಿತು.
ಸದ್ದಿಲ್ಲದ ನಡೆನುಡಿಯ ಮರೆತಂತೆ
ಬಂದ ಕರೆಗಳೆಲ್ಲವ ಆಲಿಸುವ ಬಯಕೆ
ತನ್ನದಲ್ಲವೆಂಬ ಭಯ ಕಾಡಿದ್ದು ಸಹಜ
ಪರಿಚಯವಿರದ ಎಚ್ಚರಿಕೆಯ ಜೊತೆಗೆ.
ಹೊಸತು ಹಳೆತಾಗುವುದು ಖಚಿತ
ಯೌವನದ ಕಾಲ ಕರಗುವುದು ನಿಶ್ಚಿತ
ಬೆರಗಾಗುವ ವಿಷಯವಿದಲ್ಲ ಅಪರಿಚಿತ
ನಿಟ್ಟುಸಿರಿಡಲೂ ಸಹ ಕಾಯಬೇಕು.
ಕ್ಷಣ ಕ್ಷಣವು ಕುತೂಹಲದ ಕದನ
ಹಂಬಲಿಸುತಿರುವೆ ಯಾವುದಕ್ಕೆ.
ಮನವ ಮೌನವಾಗಿಸಲಾಗದೆ?
ತಳಮಳಗಳ ತಡವರಿಕೆಯ ಬೇಗೆ
ಏನನೋ ಕಾಣುವ ಕಾತುರ ಕಣ್ಣಿಗೆ
ಕದಡಿದ ಹನಿ ಗೆರೆಯಂಚಿಗೆ ನೂಕಿ
ಮೊಗದಲ್ಲಿ ತನ್ನ ಹಾದಿ ಹುಡುಕಿತ್ತು
ಕಂಡ ಪ್ರತಿಬಿಂಬ ಅದೇ ಹೇಳಿರಲು
ದಿಟವನೇಕೊ ಒಪ್ಪದೀ ಮನಸು
ತುಟಿತೆರೆದು ತಡುಕಿದರು ಸಿಗದ
ಮಾತು, ಮೌನವೇ ಹಿತವೆನಿಸಿತು.
ಸದ್ದಿಲ್ಲದ ನಡೆನುಡಿಯ ಮರೆತಂತೆ
ಬಂದ ಕರೆಗಳೆಲ್ಲವ ಆಲಿಸುವ ಬಯಕೆ
ತನ್ನದಲ್ಲವೆಂಬ ಭಯ ಕಾಡಿದ್ದು ಸಹಜ
ಪರಿಚಯವಿರದ ಎಚ್ಚರಿಕೆಯ ಜೊತೆಗೆ.
ಹೊಸತು ಹಳೆತಾಗುವುದು ಖಚಿತ
ಯೌವನದ ಕಾಲ ಕರಗುವುದು ನಿಶ್ಚಿತ
ಬೆರಗಾಗುವ ವಿಷಯವಿದಲ್ಲ ಅಪರಿಚಿತ
ನಿಟ್ಟುಸಿರಿಡಲೂ ಸಹ ಕಾಯಬೇಕು.
Subscribe to:
Posts (Atom)