Jan 8, 2008

ಹೊಸ ಅರಿವು

ದಿನಕೆ ನೂರು ನರರ ಮರಣ
ಕ್ಷಣಕೆ ನೂರು ಕುಡಿಯ ಜನನ
ಜನನ ಮರಣ ನಿತ್ಯದೂರಣ
ಬೇಕೆ ಇದಕೆ ಕಾಲಹರಣ

ಯಾರ ಚಿಂತೆ ಯಾವ ಕಂತೆ
ಚಿಂತೆ ಕಂತೆ ದಿನದ ಸಂತೆ
ದೂಡು ದೂರ ಪರರ ತರವ
ಸರಸವಾಡು ಸರಿಗಮಪದವ

ಇಹದ ಪರಿವು ಇರದು ಆಗ
ಹೊರ ಜಗವು ಕಾಣದು ಆಗ
ಕಾವ್ಯವನ್ನು ಸವಿಯುವಾಗ
ಹೊಸ ಅರಿವು ಮೊಡುವುದಾಗ

No comments: