Sep 15, 2008

ಕನ್ನಡಪ್ರಭದಲ್ಲಿ - ಕೂಗು...ಎನ್ನ ಮನುಕುಲಕೆ!!!

ಕನ್ನಡ ಪ್ರಭ - ಸೆಪ್ಟಂಬರ್ 16, 2008,

ಕೂಗು ಕವನಗಳ ಲೋಕ. ಮನಸ್ಸಿಗೆ ತೋಚಿದ್ದನ್ನು ಒಂದಿಷ್ಟೂ ಮುಚ್ಚಿಡದ ಬ್ಲಾಗ್ ಅಂಗಣದಲ್ಲಿ ಬ್ಲಾಗಿಗ 'ಏನೆಂದು ಅರಿಯದೆ ಏನನ್ನೋ ಹುಡುಕುತ್ತಾ' ಕನ್ನಡದ ಕಂಪನ್ನು ಬೀರುತ್ತಾ ಸಾಗುತ್ತಾರೆ.....

ಬ್ಲಾಗಾಯಣ ಅಂಕಣದಲ್ಲಿ ನನ್ನ ಕೂಗು ಬ್ಲಾಗನ್ನು 'ದಡ' ಕವನದೊಂದಿಗೆ ಓದುಗರಿಗೆ ಪರಿಚಯಿಸಿದ ನಿಮಗೆ ವಿನಮ್ರ ವಂದನೆಗಳು.

-ಚಂದಿನ

ಎನ್ನ ಕೂಗಿನಲ್ಲಿ ದಡದ ನೆನಪು

ಹಳೆಯ ಅಲೆಗಳು ದಡದಿ ಕರಗಲು
ಹೊಸ ಅಲೆಗಳು ಎದ್ದು ಬರಲು
ಲೆಕ್ಕವಿಡುವ ಕುತೂಹಲ
ಕಾಣದೇ ಕ್ಷಣ ಮೊಗದಲಿ

ಮಾಯವಾದ ಹಳೆಯ ಗೆಳೆಯ
ಹುಡುಕಿಕೊಂಡ ಹೊಸ ಇನಿಯ
ಮೌನವಾಗಿ ಸೆಳೆದು ಬಳಿಗೆ
ಬಿಡುವುದೇನಿದು ಅಚ್ಚರಿ

ಸಿಹಿ ಕಹಿಯ ರುಚಿಯನುಂಡು
ನೋವು ನಲಿವುಗಳೆಲ್ಲ ಕಂಡು
ನಿಗೂಢತೆಯ ನೀಳ ನಕ್ಷೆಗೆ
ಹಿಡಿದ ಕನ್ನಡಿ ವಿಸ್ಮಯ

ಹೆಜ್ಜೆ ಗುರುತು ಬಿಟ್ಟುಹೋದರು
ಎಷ್ಟು ಮನೆಗಳ ಕಟ್ಟಿಕೊಂಡರು
ಸಿಗದು ಮತ್ತೆ ಹುಡುಕಲು
ಇರಲು ಅದೇ ಬೆತ್ತಲು

ಏನೋ ಹೇಳುವ ಹಂಬಲ
ಹೇಳಲಾಗದೆ ತಳಮಳ
ಎಸೆದ ಎಲ್ಲ ಪ್ರಶ್ನೆಗಳಿಗು
ಸಿಗಲು ಒಂದೇ ಉತ್ತರ

No comments: