Sep 17, 2008

ಏನು ಸಮಾಚಾರ?

ಪಶ್ಚಿಮದಲ್ಲಿ ದೊಡ್ಡಾನೆಗಳಿಗೆ
ದೊಡ್ಡ ಪೆಟ್ಟು
ಏಳಲಾಗದ ಕುಸಿತ
ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತ
ನೌಕರರ ಕೆಲಸಕ್ಕೆ ಕುತ್ತು
ಕಚ್ಛಾತೈಲ ಬೆಲೆ ಇಳಿಕೆ

ಇತ್ತ ಷೇರುಪೇಟೆ ಸೂಶ್ಚ್ಯಂಕ ದಕ್ಷಿಣದತ್ತ
ಮರಿ ಆನೆಗಳ ಮೊಗದಲ್ಲಿ ಕಳವಳ
ನಲ್ವತ್ತಾರು ದಾಟಿದ ರುಪಾಯಿ
ತೈಲ ಇಳಿಕೆ, ರುಪಾಯಿ ಏರಿಕೆ
ಪ್ರಯೋಜನವಿಲ್ಲ
ಬೆಕ್ಕಿಗೆ ಸಂಕಟ ,
ಇಲಿಗೆ ಪ್ರಾಣ ಸಂಕಟ

ಮತ್ತೊಂದು ಕಡೆ ಸರಣಿ
ಬಾಂಬ್ ಬ್ಲಾಸ್ಟ್ಸ್
ಮೂವತ್ತು ಮರಣ ,
ಅದೇ ಸಮಾಧಾನ
ಬಿ ಎಮ್ ಡಬ್ಲ್ಯೂ ಆರೋಪಿಗೆ ಶಿಕ್ಷೆ
ಆರುಷಿ ಕೊಲೆ ಆರೋಪಿಗಳಿಗೆ
ಬಂಧನ ಬಿಡುಗಡೆ

ಅಣು ಒಪ್ಪಂದ ಆಲ್ಮೋಸ್ಟ್ ಕ್ಲಿಯರ್
ಆಪರೇಶನ್ ಕಮಲ ಸಿಕ್ಸರ್
ಶಾಲಾ ವಿದ್ಯಾರ್ಥಿಗಳಿಗೆ
ಉಚಿತ ಬಸ್ ಪಾಸ್
ಜೊತೆಗೆ ಬೈಸಿಕಲ್
ಮತಾಂತರದ ವಿರುದ್ಧ
ಗಲಬೆ, ಗೊಂದಲ, ಇರಿತ
ಅವರು ರಾಜೀನಾಮೆಗೆ ಆಗ್ರಹ
ಮುಖ್ಯಮಂತ್ರಿಗಳ ನಕಾರ

ಇದೇ ಸುದ್ದಿ ಪೇಪರ್ನಲ್ಲಿ ,
ಟೀವಿಗಳಲ್ಲಿ, ಇಂಟರ್ನೆಟ್ಟಲ್ಲಿ ,
ಬಸ್ಸಲ್ಲಿ, ಟ್ರೈನಲ್ಲಿ, ಶಾಪಿಂಗ್
ಮಾಲ್ನಲ್ಲಿ, ಗೆಳೆಯರ ಹರಟೆಯಲ್ಲಿ
ಹ್ಹೆ...ತ್ತೇರಿ ತಲೆ ಎಕ್ಕುಟ್ಟೋಗಿದೆ
ಮಗಳೆ, ತೇಜಸ್ವಿ ಕರ್ವಾಲೋ
ಪುಸ್ತಕ ಕೊಡಮ್ಮ ಓದ್ಕೊಡ್ತೀನಿ

No comments: