Sep 18, 2008

ಬದುಕಲು ರೆಡಿಯಿದ್ದವರಿಗೆ ಒಂದಷ್ಟು ಸೂತ್ರಗಳು*

ಬೇರೊಬ್ಬರೊಂದಿಗೆ
ಹೋಲಿಕೆ ಏಕೆ ?
ಅವರ ಹಾದಿಯ ಬಗ್ಗೆ
ನಮಗರಿವಿಲ್ಲದಿದ್ದಾಗ.

ನಮ್ಮ ಸಂತೋಷಕ್ಕೆ ಯಾರೋ
ನಾಯಕರಲ್ಲ ?
ನಮ್ಮ ಹೊರತು .

ಅವರಿವರ ಅಭಿಪ್ರಾಯ,
ಅನಿಸಿಕೆಗಳು
ಆರೋಗ್ಯವಾಗಿ, ಸರಿಯಾಗಿದ್ದಲ್ಲಿ ಸ್ವೀಕರಿಸಿ ,
ಇಲ್ಲವಾದರೆ ನಿರಾಕರಿಸಿ.

ಪರಿಸ್ಥಿತಿ ಎಷ್ಟೇ ಚೆನ್ನಾಗಿ
ಅಥವ ಕೆಟ್ಟದಾಗಿದ್ದರು
ಅದು ಖಂಡಿತ ಬದಲಾಗುತ್ತದೆ

ಉಪಯೋಗಕ್ಕೆ ಬಾರದ ,
ಹಿತವೆನಿಸದ ಅಥವ
ಸಂತಸ ತರದವುಗಳಿಂದ ಆದಷ್ಟು
ದೂರವಿರಲು ಯತ್ನಿಸಿ

ಮನಸು ಹೇಗೇ ಇರಲಿ ,
ಎಲ್ಲೇ ಇರಲಿ, ನಮ್ಮ ಹತೋಟಿಯಲ್ಲಿರಲಿ

ಏಳಿ, ಎದ್ದೇಳಿ ಸಮಸ್ಯೆಗಳ
ಎದೆಗುಂದದೆ ಎದುರಿಸಿ

ಹತ್ತರಿಂದ ಮೂವತ್ತು ನಿಮಿಷವಾದರು
ಉಮ್ಮಸ್ಸಿನಿಂದ ದಿನ ನಡೆಯುವುದು
ಅಭ್ಯಾಸ ಮಾಡಿಕೊಳ್ಳಿ.

ಪ್ರತಿ ಮುಂಜಾನೆ ಏಳುವಾಗ
ಅಂದಿನ ಉದ್ದೇಶ ಸಂತೋಷವಾಗಿರಬೇಕು
ಎಂಬ ವಾಕ್ಯವನ್ನು ಮರೆಯದೆ ನೆನೆಸಿಕೊಳ್ಳಿ.

ನಮ್ಮ ಸಾಕಷ್ಟು ಸಮಯ
ಎಪ್ಪತ್ತು ವರ್ಷ ಮೇಲ್ಪಟ್ಟು
ಆರು ವರ್ಷದೊಳಗಿನವರೊಂದಿಗೆ
ಕಳೆದರೆ, ಹೆಚ್ಚು ನಗುವಿರುತ್ತದೆ

ಪ್ರತಿದಿನ ಕನಿಷ್ಟ ಮೂವರನ್ನಾದರು
ನಗಿಸುವ ಪ್ರಯತ್ನ ಆರೋಗ್ಯಕರ

ಉತ್ಸಾಹ, ಉಮ್ಮಸ್ಸು ಹಾಗು
ನಗುವಿನಿಂದಿರಲು ಯತ್ನಿಸಿದಾಗ
ನಕಾರಾತ್ಮಕ ವಿಷಯಗಳು
ತಾನಾಗಿಯೇ ದೂರವಿರುತ್ತವೆ.

ಬದುಕು ಅತ್ಯಲ್ಪ ಅವಧಿ ಮಾತ್ರ
ದ್ವೇಷಿಸುವುದಕ್ಕೆ ಕಾಲಹರಣ ಬೇಡ

ಎಲ್ಲ ವಾದಗಳು ಗೆಲ್ಲಬೇಕೆಂದಿಲ್ಲ
ಒಪ್ಪಿಗೆಯಿಲ್ಲವೆಂದು ಒಪ್ಪಿಕೊಳ್ಳುವುದು ಸೂಕ್ತ.

ಸಂಸಾರದೊಂದಿಗೆ ಹೆಚ್ಚು ಸಂಪರ್ಕ
ಹಾಗು ಸಮಯ ಕೊಡುವುದು ಅಗತ್ಯ

ನೆನಪಿರಲಿ ಮನುಜರು ತುಂಬಾ
ಅದೃಷ್ಟವಂತರು, ಸಮಸ್ಯೆಗಳಿಂದ
ಕಲಿಯಲು ಅವರಿಗೆ ಮಾತ್ರ ಸಾಧ್ಯ

ಪಯಣ ಸಂತಸಕರವಾಗಿರಲಿ,
ಅತಿಯಾದ ಅವಸರ ಬೇಡ
ವೇಗ, ಉದ್ವೇಗ ಕೊನೆಯಾಗುವವು ಬೇಗ.

ಪ್ರತಿರಾತ್ರಿ ಮಲಗುವ ಮುನ್ನ
ದಿನದ ಸಂತಸ, ಸಾಧನೆ ನೆನಪಿನಲ್ಲಿರಲಿ.

ಸರಿಯಾದ ಮಾರ್ಗ, ಸರಿಯಾದ ಮಾತು
ಸರಿಯಾದ ಮನಸು, ಸರಿಯಾದ ಕ್ರಿಯೆಯಲ್ಲಿ
ವಿಶ್ವಾಸವಿರಲಿ.

ಅತ್ಯುತ್ತಮವಾದುದು
ಇನ್ನೂ ಬರಬೇಕಿದೆ ಎಂಬ
ನಂಬಿಕೆಯಿರಲಿ.

ಅನಾರೋಗ್ಯದಲ್ಲಿ ನಮ್ಮ ಉದ್ಯೋಗ
ನಮ್ಮನ್ನು ರಕ್ಷಿಸುವುದಿಲ್ಲ
ಸ್ನೇಹಿತರು ನೆರವಾಗುತ್ತಾರೆ
ಸ್ನೇಹಿತರಿರಲಿ ,
ಮುಖ್ಯವಾಗಿ ಅವರೊಂದಿಗೆ ಸಂಪರ್ಕವಿರಲಿ

ಕಾಲ ಎಲ್ಲವನ್ನು ವಾಸಿ ಮಾಡುತ್ತದೆ ,
ಮರೆಸುತ್ತದೆ ಅದಕ್ಕೆ ಅವಕಾಶವಿರಲಿ.

ಎಲ್ಲರನ್ನು ಎಲ್ಲ ತಪ್ಪುಗಳಿಗಾಗಿ ಕ್ಷಮಿಸುವುದರಿಂದ
ಮನಸು ಹಗುರ, ಆರೋಗ್ಯಕರವಾಗಿರುವುದು.

ಹಣತೆ ಬೆಳಗಿ ಕತ್ತಲೋಡಿಸಿ
ಒಳ್ಳೆಯದು, ಇಷ್ಟವಾಗುವುದು ತಪ್ಪದೆ ಬಳಸಿ
ಯಾವುದನ್ನೂ ಶುಭಘಳಿಗೆಗಾಗಿ ಮೀಸಲಿಡಬೇಡಿ

ಹಿಂದಿನ ಕಹಿನೆನಪುಗಳಿಂದ ,
ಈ ದಿನವನ್ನು ಕೆಡಿಸಿಕೊಳ್ಳುವುದು
ಮೂರ್ಖತನ.

ನಿಮ್ಮನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ
ಯಾರು ಅವರವರನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ

ಜೀವನದಲ್ಲಿ ಎಲ್ಲವೂ ಸರಿಯಿಲ್ಲ,
ಆದರೂ ಸೊಗಸಾಗಿಯೆ ಇದೆ;
ಆಸಕ್ತಿ ಇದ್ದರೆ ಮಾತ್ರ.

ಬದುಕೊಂದು ಪಾಠಶಾಲೆ
ಕಲಿಯಲು ಬಂದಿದ್ದೇವೆ
ಪರೀಕ್ಷೆಯಲ್ಲಿ ಪ್ರಯತ್ನಿಸುತ್ತೇವೆ
ಸಮಸ್ಯೆಗಳು ಪಠ್ಯಕ್ರಮದ ಒಂದು ಭಾಗ
ಬರುತ್ತವೆ, ಹೋಗುತ್ತವೆ ಕೂಡಿ ಕಳೆವ ಲೆಕ್ಕದ ಹಾಗೆ
ಕಲಿತದ್ದು ಕೊನೆಯವರೆಗೂ ಉಳಿಯುತ್ತದೆ.

ಎಚ್ಚರವಿದ್ದಾಗಲೇ ಹೆಚ್ಚು
ಕನಸು ಕಾಣುವುದು ಲೇಸು.

ಉಲ್ಲಾಸ, ಉತ್ಸಾಹ, ಉಮ್ಮಸ್ಸು
ಹಾಗು ಸ್ನೇಹಿತರು, ಸಂಸಾರ ,
ನಂಬಿಕೆಯಿರಲು ಬಾಳು ಸುಂದರ.

ನಿಶ್ಯಬ್ದ ವಾತಾವರಣದಲ್ಲಿ
ಕನಿಷ್ಟ ಹತ್ತು ನಿಮಿಷವಾದರು
ಕಳೆಯುವುದು ಆರೋಗ್ಯಕ್ಕೆ ಅಗತ್ಯ.

(ಹತ್ತು ದಿಕ್ಕುಗಳಿಂದ ಓದಿದ್ದರ ಪದ್ಯರೂಪಗಳು)

No comments: