Apr 19, 2009

ಸೌಂದರ್ಯ?

ಎಲ್ಲೆಮೀರಿದವರಿಗಾಗಿ
ಕೃತಜ್ಞತೆಗಳೊಂದಿಗೆ
ಧನ್ಯವಾದಗಳನ್ನು
ಅರ್ಪಿಸುವುದೇ ಸೊಗಸು

ತನ್ನ ಹಾದಿಯನ್ನೇ ಮರೆತು
ಅಲ್ಲ, ತನ್ನ ಬದುಕನ್ನೇ ಬದಿಗಿಟ್ಟು,
ಕುಂಟ ನಾಯಿಯನ್ನು ದುರಂತದಿಂದ
ಪಾರು ಮಾಡುವವನೇ ಸುಂದರ

ನಾಳೆ ಇದ್ದರೂ ಇಲ್ಲದಂತೆ
ಈ ಕ್ಷಣವನ್ನು ಆಸ್ವಾದಿಸುವುದನ್ನು,
ಅಥವಾ ವಿಧಿಯ ಕ್ರೂರ ನೋಟಕ್ಕೆ
ಎದೆಗುಂದದಿರುವುದನ್ನು ಕಲಿತಾಗ
ಹಿತವಾದ ಭಾವನೆಗಳು ಮೂಡುತ್ತವೆ

ಅತೀವ ಸಂಕಷ್ಟದಲ್ಲಿರುವಾಗ,
ಪ್ರತಿಕ್ಷಣವೂ ಅಮೂಲ್ಯವಾದಾಗ
ಅವನು ಕೊನೆಯುಸಿರೆಳೆಯುವ ಕ್ಷಣದಲ್ಲಿದ್ದರೂ
ಬೀಕರ ಯುದ್ಧದಲ್ಲಿ ನೊಂದವರ ಶುಶ್ರೂಷೆ
ಮಾಡುವವನೇ ಅತಿ ಸುಂದರ

ತೀವ್ರ ರಕ್ತದಾಹವಿರುವ ಪ್ರಪಂಚದಲ್ಲಿ
ಮೌನವಾಗಿ, ವಿನಯವಂತನಾಗಿ
ಮಾನವತ್ವವನ್ನು ಜೊತೆಗೊಯ್ಯುತ್ತಿದ್ದಾನೆ.

ಮೂಲ ಕವಿ : ಯೂನೂಸ್ ಪೀರ್ಬೊಕಸ್
ಕನ್ನಡಕ್ಕೆ : ಚಂದಿನ

No comments: