Apr 30, 2008

ಭವತೀ ಭಿಕ್ಷಾಂದೇಹಿ

ಭವತೀ ಭಿಕ್ಷಾಂದೇಹಿ ಅಂದ ರಾವಣ
ಸೀತೆಯ ಅಪಹರಿಸಿದ ಲಂಕೆಗೆ
ಅಶೋಕವನದಲಿರಿಸಿದ ಅವಳ
ಬೇಟಿಯಾದ ಹನುಮಂತ
ಕಂಡು ಬಾರಯ್ಯ ಎಂದ
ಮಾತ್ರಕೆ ಸುಟ್ಟು ಬಂದ

ಕಲಿಯುಗವೇನು ಭಿನ್ನವೇ
ಇಲ್ಲಿಹರು ರಾಮ, ಹನುಮ ,
ರಾವಣ, ಸೀತೆಯರು
ಯಂತ್ರ ಮಂತ್ರ ತಂತ್ರ
ಕಲಿತ ಕಿರಾತಕರು
ನಿನ್ನೆ ಇಂದು ನಾಳೆ
ಬಲ್ಲ ಬಲಾಢ್ಯರು

ಕ್ಷಣಕೆ ಇಲ್ಲಿ ಮರುಕ್ಷಣಕೆ ಅಲ್ಲಿ
ಅಲ್ಲಿ ಇಲ್ಲಿ ಎಲ್ಲೆಲ್ಲೂ ಇಹರು
ಇವರ ಮುಂದೆ ಬೇರೆ
ಎಲ್ಲ ಸಪ್ಪೆ, ಇವರಿಂದ
ತಿಳಿಯಬೇಕು ಬೆಟ್ಟದಷ್ಟು
ಇವರು ಯಾರಿಗೇನು
ಕಡಿಮೆ ಬಲ್ಲೆಯೇನು

ರಾಮಾಯಣದೊಳಗೇನಿದೆ
ಕಲಿಯುಗದಲೆಲ್ಲ ಅಡಗಿದೆ
ಶಾಂತಿ, ಸುಖ, ಸಂತಸಕೆ
ಹಣ ಸಾಕಷ್ಟು ಬಳಿಯಿದೆ
ಹಣದ ಮುಂದೆ ಎಲ್ಲ ಗೌಣ
ಧನವೇ ಮೂಲ ಮಂತ್ರ ಜಾಣ
ಮೌಲ್ಯಗಳ ಮೊದಲು ಹಣ
ನೆಮ್ಮದಿಗೆ ಬೇರೇನು ಬೇಕಣ್ಣ

ಏಕೆ ಹೇಗೆ ಎಂಬ ಪ್ರಶ್ನೆ ಬೇಕೆ
ಹಳೆಯ ಪುಟವು ನೆಪ ಮಾತ್ರಕೆ
ಸರಳ ಜೀವನ ಮಂತ್ರವೇಕೆ
ಮೌಲ್ಯದ ನೀತಿಪಾಠಗಳೇಕೆ
ಅದು ಮೀಸಲಿರಲಿ ರಾಮಾಯಣಕೆ
ಕಲಿಯುಗದ ಪಾಪದ ಜನಕೆ

No comments: