Jan 12, 2009

ಗೆಳತಿ

ನೀನು ಕಗ್ಗತ್ತಲಿಂದ ಹೊರಬಂದವಳು,
ಕೈಯಲ್ಲಿ ಕಂಗೊಳಿಸುವ ಪರಿಮಳ ಭರಿತ ಹೂಗಳೊಂದಿಗೆ,
ಈಗ ನಿನ್ನ ಬಗ್ಗೆ ತೀವ್ರ ಕಹಿ ಮಾತುಗಳಾಡುವವರಿಂದ,
ಗೊಂದಲಗಳಲ್ಲಿ ಸಿಕ್ಕಿ ನರಳುವವರಿಂದ ಖಂಡಿತ ಹೊರಬರುವೆ.

ಏಕೆಂದರೆ, ನಾನು ನಿನ್ನ ಅತ್ಯಂತ ಶ್ರೇಷ್ಠ,
ಹಾಗು ಸಂತೃಪ್ತಿಯ ಕ್ಷಣಗಳನ್ನು ಕಂಡಿದ್ದೇನೆ.
ನಿನ್ನ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವರ ಕಂಡು ಕೋಪಗೊಂಡಿದ್ದೇನೆ.
ನನ್ನ ಮನಸು ಸ್ಥಿರ ಹಾಗು ಶಾಂತವಾಗಿರಲೆಂದು ಸದಾ ಪ್ರಾರ್ಥಿಸುತ್ತೇನೆ, ಆದರೂ
ಈ ಜಗತ್ತು ಸತ್ತು ಒಣಗಿದ ಎಲೆಗಳಂತಾಗಬೇಕು, ಅಥವಾ
ಹೊಳೆಯಲ್ಲಿ ಕೊಚ್ಚಿಕೊಂಡೋಗುವ ಕಸ - ಕಡ್ಡಿಯಂತಾಬೇಕೆಂದು ಬಯಸುತ್ತೇನೆ.
ಆಗಲೇ ನಿನ್ನ ಒಬ್ಬಂಟಿಯಾಗಿ ಮತ್ತೆ ಕಾಣುವ ಸದಾವಕಾಶ
ನನ್ನದಾಗುತ್ತದೆ.

(ಮೂಲ ಕವಿ: ಎಜ್ರ ಪೌಂಡ್ )

No comments: