May 27, 2009

ನಾನಿಂದು ಪ್ರಾರ್ಥನಾ ಮಂದಿರಕ್ಕೆ ಹೋಗಲಿಲ್ಲ

ನಾನಿಂದು ಪ್ರಾರ್ಥನಾ ಮಂದಿರಕ್ಕೆ ಹೋಗಲಿಲ್ಲ,
ದೇವರು, ನನ್ನನ್ನು ಅರ್ಥಮಾಡಿಕೊಳ್ಳುತ್ತಾನೆಂದು ನಂಬಿದ್ದೇನೆ
ಕಡಲಕಿನಾರೆಯಲ್ಲಿ ನೀಲಿ ಹಾಗು ಬಿಳಿ ಬಣ್ಣದ ಅಲೆಗಳು ನೊರೆಯೆಬ್ಬಿಸಿ ಸುತ್ತುತ್ತಿವೆ,
ಮಕ್ಕಳು ಸುತ್ತಾಡುತ್ತಿದ್ದಾರೆ ಯಥೇಚ್ಛವಾದ ಮರಳ ದಂಡೆಗಳಲ್ಲಿ.
ಅವನಿಗೆ ಗೊತ್ತಿದೆ, ನಿಜವಾಗಲೂ ಅವನಿಗೆ ಗೊತ್ತಿದೆ
ನಾನಿಲ್ಲಿರುವುದು ಬಹಳ ಕಡಿಮೆ ಸಮಯಕ್ಕೆ ಮಾತ್ರ ಸೀಮಿತವೆಂದು,
ಬೇಸಿಗೆ ವಿರಾಮದ ವಿಶ್ರಾಂತಿಯೂ ಸಹ ಸ್ವಲ್ಪ ಸಮಯದಲ್ಲೇ ಹೇಗೆ ಮುಗಿದೇ ಹೋಯಿತಲ್ಲಾ,
ಅವನಿಗೆ ತಿಳಿದಿದೆ, ನಾನು ಎಲ್ಲವೂ ಹೇಳಿ, ಮುಗಿಸಿದ ನಂತರ
ನಮಗೆ ಜೊತೆಯಲ್ಲೇ ಇರಲು ಸಾಕಷ್ಟು ಸಮಯ ಸಿಗುವುದೆಂದು.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

No comments: