Jun 8, 2009

ಸಾಲು – 7

- 1 -
ಜೀವಸೃಷ್ಟಿಯು ಆರೋಗ್ಯಕರವಾಗಿ,
ನಿರಂತರವಾಗಿ ಮುನ್ನಡೆಯಲು ಸಾಧ್ಯವಾಗುವುದು,
ಋತುಮಾನಗಳು ಸಹಜವಾಗಿ, ಸ್ವಾಭಾವಿಕವಾಗಿ
ಸಂಭವಿಸುವಾಗ ಮಾತ್ರ.
ಎಂದು ಹೇಳುತ್ತಿದ್ದ ಅದ್ಯಾಪಕ
ದಿಢೀರನೆ ಭಾವುಕನಾಗಿ, ಮೌನವಾಗಿ ಕುಸಿದಿದ್ದೇಕೆಂದು
ಇದುವರೆಗೂ ತಿಳಿಯಲಿಲ್ಲ.


- 2 -
ಸರ್ವಸ್ವವೂ ನಿನ್ನದೇ ಎಂದು ಆರ್ದವಾಗಿ
ಪದೇ ಪದೇ ಹೇಳುತ್ತಿದ್ದ ಚಂಚಲ ಗೆಳತಿ
ಸರ್ವಸ್ವವನ್ನೂ ದೋಚಿ ಪರಾರಿಯಾದ
ನಂತರವೇ ಅದರ ನಿಗೂಢ ಹಿನ್ನಲೆಯ ಪರಿಚಯ
ನನಗೆ ನಿಧಾನವಾಗಿ ಅರ್ಥವಾಗಲಾರಂಬಿಸಿದ್ದು
ಇನ್ನೂ ಅಚ್ಚರಿಯಾಗೇನೂ ಉಳಿದಿಲ್ಲ.

- 3 -
ಪೆಕರು ಪೇದೆಯೊಬ್ಬ,
ಬಡಪಾಯಿ ತರಕಾರಿ ಗಾಡಿಯವನ ಬಳಿ
ಹತ್ತು ರುಪಾಯಿ ಲಂಚ, ಬಿಟ್ಟಿ ತರಕಾರಿಗಾಗಿ
ಜೋರುಮಾಡುತ್ತಾ, ಪೀಡಿಸುತ್ತಾ, ತಾಜಾ ಬಿಕ್ಷುಕನಂತೆ
ಗೋಗರೆಯುತ್ತಿದ್ದದ್ದು ಅವನ ಅನುಭವದ ಕೊರೆತೆಯಿಂದಲೊ,
ಇಲ್ಲಾ ಯಾರಾದರೂ ನೋಡುತ್ತಾರೆಂಬ ಭಯದಿಂದಲೊ?

ಹಾಗೇ,
ಇನ್ನೊಬ್ಬ ಪುಡಾರಿ ಪೇದೆ ಅದೃಷ್ಟ ಕೆಟ್ಟು
ಸಬಲ ಮಹಿಳೆಯ ಮಾಂಗಲ್ಯ ದೋಚಲೆತ್ನಿಸಿದಾಗ,
ಸಿಕ್ಕಿಹಾಕಿಕೊಂಡು, ಧರ್ಮದೇಟಿನ ಪ್ರಸಾದ ಸವಿದ ನಂತರ
ಅಸಹಾಯಕನಂತೆ ನಾನೊಬ್ಬ ಬಡಪೇದೆಯೆಂದು ಮೂದಲಿಸಿದ್ದು
ಅವನ ದಡ್ಡತನವೊ, ಇಲ್ಲಾ ಭಂಡತನವೊ?

- 4 –
ವಿನಾಃಕಾರಣ ಕೋಪಗೊಂಡು,
ಪದೇ ಪದೇ ಮಾತು ಬಿಡುವ ಗೆಳತಿಯೊಬ್ಬಳು
ಯಾವುದಕ್ಕೂ ಪ್ರತಿಕ್ರಿಯಿಸದೆ ನಿರ್ಭಾವುಕನಾಗಿದ್ದಾಗ,
ಒಮ್ಮೆಗೇ ಮೇಲೆರಗಿ ಎದೆಗೆ ಬಲವಾಗಿ ಮುಷ್ಟಿಯಿಂದಾ ಹೊಡೆದೊಡೆದು,
ಗಟ್ಟಿಯಾಗಿ ಅಪ್ಪಿಕೊಂಡು ಗಳಗಳ ಕಣ್ಣೀರಿಟ್ಟಾಗ,
ನನಗೀಗಾಗಲೇ ಮದುವೆಯಾಗಿದೆ ಎಂದು ಹೇಳಲು
ನನ್ನ ಮನಸೇಕೊ ತಡವರಿಸಿದ್ದು ಸುಳ್ಳಲ್ಲ.

2 comments:

ಶಿವಪ್ರಕಾಶ್ said...

HA HA HA...
SAKATHAAGI IDAVE.

ಚಂದಿನ | Chandrashekar said...

ಶಿವಪ್ರಕಾಶ್ ಅವರೆ,

ಧನ್ಯವಾದಗಳು.