Jun 27, 2009

ಅಡಗಿದ್ದ ಶಿಷ್ಟ ಕರೆಗಳು

ಅಂತಃರಂಗದೊಳಗಿನ ಪುಟ್ಟ ದನಿ
ನನ್ನ ಕರೆದು ಹೇಳುತ್ತಿದೆ---
“ಸತ್ಯವೆಂಬ ಉಡುಗೊರೆ ಹಂಚು,
ಅದವರ ನೋವು ನಿವಾರಣೆಗೆ ನೆರವಾಗುತ್ತದೆ.” ಎಂದು.
ಅಂತಃಸತ್ವದಿಂದ ಚೈತನ್ಯ ಹೊಮ್ಮುತ್ತಿದೆ,
ಅದರ ದೃಢವಾದ ಪಿಸುಮಾತುಗಳಿಂದ.
ನನ್ನನ್ನು ಒತ್ತಾಯಿಸುತ್ತದೆ, ಒಳಗಿನ ಬೆಳಕನ್ನು ಹರಡಿ,
ಅಂಧಕಾರದಲ್ಲಿರುವವರ ಬದುಕನ್ನು ಬೆಳಗಲು.
ಆತ್ಮಸಾಕ್ಷಿ ಮೌನ ಮುರಿದು,
ನನ್ನಾತ್ಮವನ್ನು ಎಚ್ಚರಿಸುತ್ತದೆ, ಸುಖನಿದ್ರೆಯಿಂದ.
ದೊಂಬಿಡುತ್ತದೆ, ಪ್ರಶಾಂತ ಸಂತಸವನ್ನು ಪಸರಿಸಲು,
ಏಕೆಂದರೆ, ಉಳಿದವರನ್ನು ಅದು ತೊಂದರೆಗಳಿಂದ ಸಂರಕ್ಷಿಸುತ್ತದೆ.
ದಿವ್ಯ ನ್ಯಾಯಾಲಯದಲ್ಲಿ, ಅಂತರಾಳವೆಂಬ ನ್ಯಾಯಾಧೀಶರು
ಸೂಚಿಸುತ್ತಾರೆ, ನ್ಯಾಯವೆಂಬ ಸುವರ್ಣ ನಿಯಮವನ್ನು ಪಾಲಿಸಲು.
ಮೂಲ ನಂಬಿಕೆಗಳನ್ನು ಆಚರಿಸುತ್ತಾ ಸಮಾಜಕ್ಕೆ ಮಾದರಿಯಗಲು,
ಅದು ಅನ್ಯರ ಸಕಲ ಕಷ್ಟ ನಿವಾರಣೆಗೆ ಬಹಳ ಉಪಯೋಗವಾಗುತ್ತದೆ.
ಪ್ರಜ್ವಲ ಆಧ್ಯಾತ್ಮದ ಕರೆ
ಮತ್ತೆ ಚಿಗುರೊಡೆಯುತ್ತದೆ
ಈ ಸಲ ನನ್ನನ್ನು ವಿಶಾಲ ದೂರದೃಷ್ಟಿಯನ್ನು ಹಂಚಿಕೊಳ್ಳಲು ತಿಳಿಸುತ್ತದೆ,
ಎಲ್ಲರೂ ಸರ್ವ ಋತುಗಳಲ್ಲಿ, ಸನ್ಮಾರ್ಗದಲ್ಲಿ ನಡೆಯಲು ಸಹಾಯವಾಗಲೆಂದು.
ಅಂತಃರಂಗದ ಅರ್ಚಕ ಹೇಳುತ್ತಾನೆ,
ನೋವು ನಿವಾರಕ ಶಕ್ತಿಯನ್ನು ಅನುಗ್ರಹಿಸಲು,
ಮತ್ತೆ ಆಜ್ಞಾಪಿಸುತ್ತಾನೆ, ಅದರ ಸದುಪಯೋಗವನ್ನು ಎಲ್ಲೆಡೆ ಹರಡಲು,
ಎಲ್ಲರೂ ತಮ್ಮ ಸುಂಗಧ ಪರಿಮಳವನ್ನು ಮತ್ತೆ ಹಿಂಪಡೆಯಲು.
ನನ್ನ ಏಕಾಂತತೆಯ ಗೂಡಿಂದ,
ನನಗೆ ಜ್ಞಾನ ಸಿದ್ಧಿಸುತ್ತದೆ, ದಿವ್ಯಸ್ಪೂರ್ತಿಯ ದೇವಕನ್ಯೆಯರಿಂದ,
ನಂತರ ಅದು ಎಲ್ಲಡೆಗೆ ಹಬ್ಬುತ್ತದೆ,
ಯಾರೊಬ್ಬರನ್ನೂ ಬಿಡದ ಹಾಗೆ, ಅವರ ದುಃಖಗಳನ್ನು ಸರ್ವನಾಶಮಾಡಲು.
ಅಡಗಿದ್ದ ಶಿಷ್ಟ ಕರೆಗಳ ಈ ಜ್ಯೋತಿ
ಜೀವಂತವಾಗಿ ಹೀಗೇ ಬೆಳಗುತ್ತಿರಲು,
ನಾನು ಮುಂದುವರೆಸುತ್ತೇನೆ, ಶಿಷ್ಟ ಸಲಹೆಗಳ ಸ್ವೀಕರಿಸುವುದನ್ನು,
ನಾನು ಹೀಗೆ ಹಂಚಿಕೊಳ್ಳುವುದನ್ನೂ ಸಹ ಮುಂದುವರೆಸುತ್ತೇನೆ,
ಸರ್ವ ಶ್ರೇಷ್ಠ ಜಗತ್ ಸತ್ಯಗಳ ಹರಡುವುದನ್ನು.

ಮೂಲ ಕವಿಯತ್ರಿ : ಚಿತ್ರ .ಜಿ. ಲೇಲೆ
ಕನ್ನಡಕ್ಕೆ : ಚಂದಿನ

No comments: